ದೊಡ್ಡಬಳ್ಳಾಪುರ: ನಗರದ ಹೊರವಲಯದ ಮುತ್ತೂರು, ಸಿದ್ದೆೀನಾಯಕನ ಹಳ್ಳಿ, ಡಿ.ಕ್ರಾಸ್ ಮಾರ್ಗವಾಗಿ ಬಿಎಂಟಿಸಿ ಬಸ್ ಸಂಚಾರ ಸೌಲಭ್ಯ ಕಲ್ಪಿಸಿಕೊಡಬೇಕು. ನಗರದಲ್ಲಿ ಬಿಎಂಟಿಸಿ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕನ್ನಡ ಪಕ್ಷದ ನೇತೃತ್ವದಲ್ಲಲಿ ಇಲ್ಲಿನ ಗ್ರಾಮಸ್ಥರು ನಗರದ ರೇಲ್ವೆ ನಿಲ್ದಾಣ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ನಾಯಕ್, `ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ನಗರದ ಹೊರವಲಯದ ಮುತ್ತೂರು, ಸಿದ್ದೆೀನಾಯಕನಹಳ್ಳಿಯಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚಿನ ಜನರು ವಾಸಿಸುತ್ತಿದ್ದು, ಇಲ್ಲಿನ ಜನರಿಗೆ ಬಸ್ ಸೌಕರ್ಯಗಳ ಕೊರತೆಯಿದೆ.
ಈ ಪ್ರದೇಶಗಳಿಗೆ ಬಿಎಂಟಿಸಿ ಬಸ್ಗಳನ್ನು ಡಿ.ಕ್ರಾಸ್ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗೃಹ ಮತ್ತು ಸಾರಿಗೆ ಸಚಿವ ಅಶೋಕ್ ಅವರಿಗೆ ಹಾಗೂ ಸಾರಿಗೆ ಸಂಸ್ಥೆಗೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಈ ಬಗ್ಗೆ ಸಾರಿಗೆ ಇಲಾಖೆಯಿಂದ ಭರವಸೆಯೂ ಸಿಕ್ಕಿತ್ತು.
ಆದರೆ ಈ ವರೆವಿಗೂ ಇದರ ಬಗ್ಗೆ ಗಮನ ಹರಿಸಿಲ್ಲ. ಇಲ್ಲಿನ ಪ್ರದೇಶದಲ್ಲಿನ ನೂರಾರು ವಿದ್ಯಾರ್ಥಿಗಳು ಕಾರ್ಮಿಕರು ಬಸ್ಗಳಿಗಾಗಿ ನಿತ್ಯ ಪರದಾಡುವಂತಾಗಿದೆ. ನಗರಕ್ಕೆ ಬರಲು ರೈಲ್ವೆ ಹಳಿಗಳನ್ನು ದಾಟಿ ಬರುತ್ತಿದ್ದಾರೆ. ಕೈಗಾರಿಕಾ ಪ್ರದೇಶಕ್ಕೆ ಹೋಗಲು ರೇಲ್ವೆ ನಿಲ್ದಾಣ ವೃತ್ತದ ಬಳಿಗೆ ಬರಬೇಕಿದೆ.
ಈ ಕೂಡಲೇ ಕೆಲವು ಬಸ್ಗಳನ್ನಾದರೂ ಈ ಮಾರ್ಗದಲ್ಲಿ ಚಲಿಸಲು ಅನುವು ಮಾಡಿಕೊಡಬೇಕು. ನಗರದಲಿನ್ಲ ಬಿಎಂಟಿಸಿ ಬಸ್ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ನಗರದಲ್ಲಿ ಬಿಎಂಟಿಸಿ ಘಟಕ ಸ್ಥಾಪಿಸಬೇಕು~ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ನಗರ ಕಾರ್ಯದರ್ಶಿ ವೆಂಕಟೇಶ್ ಮುಖಂಡರಾದ ಪರಮೇಶ್, ಮಂಜುನಾಥ್ ಹಾಜರಿದ್ದರು.