ಬೇಸಿಗೆಗಾಲ ಕಳೆದು ಮಳೆಗಾಲ ಬಂದಿದ್ದು, ಸಂಜೆ ವೇಳೆ ಆಕಾಶ ಇನ್ನಷ್ಟು ಸುಂದರ ಕಾಣವುದಲ್ಲದೇ ನಿಧಾನವಾಗಿ ಚಳಿಯು ಆವರಿಸತೊಡಗಿದೆ. ಮೋಡ ಕವಿದ ವಾತಾವರಣವಿದ್ದರೂ ಕೆಲವೊಮ್ಮೆ ಮಳೆಯಾಗುವುದಿಲ್ಲ. ಆದರೆ ಚಳಿ ಮಾತ್ರ ತನ್ನ ಹಿಡಿತವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ.
ನಗರಪ್ರದೇಶದಲ್ಲಿ ಈ ರೀತಿಯ ವಾತಾವರಣವಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಬೇರೆಯದ್ದೇ ಸ್ಥಿತಿಯಿದೆ. ರೈತರು ಸೂರ್ಯ ಉದಯಿಸುವ ಮುನ್ನವೇ ಹೊಲಗದ್ದೆಗಳತ್ತ ತೆರಳುತ್ತಿದ್ದಾರೆ.
`ಮೇ ಅಂತ್ಯ ಮತ್ತು ಜೂನ್ ಆರಂಭದಲ್ಲಿ ಕೆಲ ಕಡೆ ಭಾರಿ ಮಳೆಯಾಯಿತು. ಕಳೆದ ಸಲದಂತೆ ಈ ಸಲವೂ ಭಾರಿ ಮಳೆ ಬರುತ್ತದೆ ಎಂದು ನಿರೀಕ್ಷಿಸಿದ್ದೇವೆ. ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ನೆಲಗಡಲೆ ಬಿತ್ತನೆ ಬೀಜಗಳನ್ನು ಈಗಾಗಲೇ ರೈತ ಸಂಪರ್ಕ ಕೇಂದ್ರ ಮತ್ತು ಇತರ ಕಡೆ ಪೂರೈಸಲಾಗಿದೆ. ರಸಗೊಬ್ಬರ ಅಗತ್ಯವಿರುವಷ್ಟು ಸಂಗ್ರಹಿಸಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎ.ಸಿ.ನಟರಾಜ್ .