ನೆಲಮಂಗಲ: ತಾಲ್ಲೂಕಿನ ಭೈರಶೆಟ್ಟಿಹಳ್ಳಿಯ ರೈಲ್ವೆ ಗೊಲ್ಲಹಳ್ಳಿಯ ಬೈಲಾಂಜನೇಯಸ್ವಾಮಿಯ ಬ್ರಹ್ಮರಥೊತ್ಸವ ಸಂಭ್ರಮದಿಂದ ಈಚೆಗೆ ನಡೆಯಿತು.
ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೆ ಸಾವಿರಾರು ಜನ ಪಾಲ್ಗೊಂಡಿದ್ದರು. ಸುತ್ತಮುತ್ತಲ ಊರುಗಳಿಂದ ಬಂದಿದ್ದ ಭಕ್ತರಿಗೆ ನೆರವಾಗಲು ಕಿಲೋಮೀಟರ್ನಷ್ಟು ದೂರದ ಇಕ್ಕೆಲಗಳಲ್ಲಿ ಅರವಂಟಿಗೆಗಳನ್ನು ನಿರ್ಮಿಸಲಾಗಿತ್ತು. ಬಿಸಿಲಿನಿಂದ ದಣಿದವರಿಗೆ ಪ್ರಸಾದ ರೂಪದಲ್ಲಿ ನೀರು ಮಜ್ಜಿಗೆ, ಬೆಲ್ಲದ ಪಾನಕ, ಕೋಸಂಬರಿಗಳನ್ನು ವಿತರಿಸಿದರೆ ಕೆಲವರು ಅನ್ನದಾಸೋಹವನ್ನು ಏರ್ಪಡಿಸಿದ್ದರು.