‘ಭವನ ಪೂರ್ಣಗೊಳಿಸಲು ಹಣ ಇಲ್ಲ. ಹೀಗಾಗಿ ಸಿಮೆಂಟ್ ಗಿಲಾವ್ ಕಾಣದ ಇಟ್ಟಿಗೆ ಗೋಡೆಗಳು ಗಾಳಿ, ಮಳೆ ಹೊಡೆತಕ್ಕೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದ ಜನತೆ ವಿವಾಹ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಪಟ್ಟಣಗಳಿಗೆ ತೆರಳಬೇಕಾಗಿದೆ. ಹೆಚ್ಚಿನ ಹಣ ನೀಡಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡಬೇಕಾಗಿದೆ. ಗ್ರಾಮದಲ್ಲಿ ಸಮುದಾಯ ಭವನ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.‘ಸಮುದಾಯ ಭವನ ಪಾಳು ಬಿದ್ದು ಹಾಳಾಗುವ ಮೊದಲು ಜನಪ್ರತಿನಿಧಿಗಳು ಎಚ್ಚೆತ್ತು ಹಣ ಮಂಜೂರು ಮಾಡಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.