ಲಖನೌ (ಪಿಟಿಐ): ಮುಜಫ್ಫರ್ನಗರ ಗಲಭೆ ಸಂತ್ರಸ್ತರ ಶಿಬಿರಗಳಲ್ಲಿ ಜನರ ಮರಣದ ಬಗ್ಗೆ ಉತ್ತರ ಪ್ರದೇಶ ಸಚಿವ ನಾರದ್ ರೇ ನೀಡಿದ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ‘ಮಕ್ಕಳು, ವಯಸ್ಕರು ಮತ್ತು ವೃದ್ಧರು ಸಾಯುವುದನ್ನು ತಪ್ಪಿಸಲಾಗದು.
ಶಿಬಿರದಲ್ಲಿ ಇರುವವರು ಮಾತ್ರ ಸಾಯುವುದಿಲ್ಲ, ಅರಮನೆಯಲ್ಲಿ ವಾಸಿಸುವವರೂ ಸಾಯುತ್ತಾರೆ. ನಮ್ಮ ಮನೆಗಳಲ್ಲಿಯೂ ಮಕ್ಕಳು ಸಾಯುತ್ತಾರೆ. ಎಲ್ಲೆಡೆಯೂ ಜನ ಸಾಯುತ್ತಾರೆ’ ಎಂದು ರೇ ಹೇಳಿದ್ದರು. ಸಮಾಜವಾದಿ ಪಕ್ಷದ ಸರ್ಕಾರ ಜನರ ಕಷ್ಟಗಳ ಬಗ್ಗೆ ಕಿವುಡಾಗಿದೆ ಎಂದು ಟೀಕಿಸಿರುವ ಪ್ರತಿಪಕ್ಷಗಳು ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.