ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಹೇಳಿಕೆಗೆ ಪ್ರತಿಪಕ್ಷಗಳ ಆಕ್ರೋಶ

Last Updated 12 ಜನವರಿ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಮುಜಫ್ಫರ್‌ನಗರ ಗಲಭೆ ಸಂತ್ರಸ್ತರ ಶಿಬಿರಗಳಲ್ಲಿ ಜನರ ಮರಣದ ಬಗ್ಗೆ ಉತ್ತರ ಪ್ರದೇಶ ಸಚಿವ ನಾರದ್‌ ರೇ ನೀಡಿದ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ‘ಮಕ್ಕಳು, ವಯಸ್ಕರು ಮತ್ತು ವೃದ್ಧರು ಸಾಯುವುದನ್ನು ತಪ್ಪಿಸ­ಲಾಗದು.

ಶಿಬಿರದಲ್ಲಿ ಇರುವವರು ಮಾತ್ರ ಸಾಯುವುದಿಲ್ಲ, ಅರಮನೆ­ಯಲ್ಲಿ ವಾಸಿಸುವವರೂ ಸಾಯು­ತ್ತಾರೆ. ನಮ್ಮ ಮನೆಗಳ­ಲ್ಲಿಯೂ ಮಕ್ಕಳು ಸಾಯುತ್ತಾರೆ. ಎಲ್ಲೆಡೆಯೂ ಜನ ಸಾಯುತ್ತಾರೆ’ ಎಂದು ರೇ ಹೇಳಿದ್ದರು. ಸಮಾಜವಾದಿ ಪಕ್ಷದ ಸರ್ಕಾರ ಜನರ ಕಷ್ಟಗಳ ಬಗ್ಗೆ ಕಿವುಡಾಗಿದೆ ಎಂದು ಟೀಕಿಸಿರುವ ಪ್ರತಿಪಕ್ಷಗಳು ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT