ಬೆಂಗಳೂರು: ಬಯೊಟೆಕ್ನಾಲಜಿ ವಿಷನ್ ಗ್ರೂಪ್ನ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು ಸೋಮವಾರ ಐಟಿ- ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಬಯೊಟೆಕ್ನಾಲಜಿಯ ಅವಕಾಶಗಳ ಬಗ್ಗೆ ವಿವರ ನೀಡಿದರು.
ಐಟಿ- ಬಿಟಿ ಇಲಾಖೆಯಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ಈ ಹಿಂದೆ ಸಚಿವರ ಬಗ್ಗೆ ತಾವು ನೀಡಿದ್ದ ಹೇಳಿಕೆಯು ಯಾವುದೇ ದುರುದ್ದೇಶದಿಂದ ಕೂಡಿರಲಿಲ್ಲ ಎಂದರು.