ಮಹೇಶ್.ಜಿ ನಿರ್ಮಿಸುತ್ತಿರುವ `ಸಡಗರ~ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ.
ಗೋಪಿಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಶಂಕರ್ಆರ್ಯನ್ ಅಭಿನಯಿಸುತ್ತಿದ್ದಾರೆ. ಯಜ್ಞಾಶೆಟ್ಟಿ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಉಳಿದ ಶರತ್ ಲೋಹಿತಾಶ್ವಾ, ತಬಲನಾಣಿ, ಮಂಜುನಾಥ ಹೆಗಡೆ, ಪದ್ಮಿನಿ ಪ್ರಕಾಶ್, ಆಶಾರಾಣಿ, ಕುಣಿಗಲ್ ಸುನಿಲ್, ಕೃಷ್ಣ ಅಡಿಗ ಮುಂತಾದವರಿದ್ದಾರೆ.
ಶ್ರೀಧರ್.ವಿ.ಸಂಭ್ರಮ್ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಾಹಕರಾಗಿದ್ದಾರೆ. ಸನತ್ಸುರೇಶ್ ಸಂಕಲನ ಹಾಗೂ ಕಲೈ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸಂತೋಷ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.