ಹನುಮಂತನಗರದ ಸೃಷ್ಟಿ ಅಭಿನಯ ಕಲಾವಿದರ ಕೇಂದ್ರದ ನಿರ್ದೇಶಕರು ಮತ್ತು ನೃತ್ಯದ ಮೂಲಕ ಚಿಕಿತ್ಸೆ ನೀಡುವ ಕಲಾವಿದರಾದ ಎ.ವಿ. ಸತ್ಯನಾರಾಯಣ ಮೇ 24ರಂದು ಅಮೆರಿಕದ ನ್ಯೂ ಅರ್ಲಿಯನ್ಸ್ನಲ್ಲಿ ನಡೆದ ರೋಟರಿ ಅಂತರ್ರಾಷ್ಟ್ರೀಯ ಸಮಾವೇಶದಲ್ಲಿ ಮತ್ತು 25ರಂದು ಅರ್ಲೆಂಡ್ನ ಅಮೆರಿಕ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ನತ್ಯ ಚಿಕಿತ್ಸಾ ಕಾರ್ಯಗಾರ ನಡೆಸಿಕೊಟ್ಟರು.
ಜೂನ್ 3ರಂದು ಬೋಸ್ಟನ್ನಲ್ಲಿ ನಡೆಯುವ ಅಮೆರಿಕ ವೀರಶೈವ ಸಮಾವೇಶದಲ್ಲಿಯೂ ಅವರು ನತ್ಯ ಪ್ರದರ್ಶನ ನೀಡಲಿದ್ದಾರೆ.
ಮಸಾಚ್ಯುಸೆಟ್ಸ್ನಲ್ಲಿರುವ ಲೆಸ್ಲಿ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ನೃತ್ಯ ಚಿಕಿತ್ಸೆ ಮತ್ತು ನತ್ಯ ಚಿಕಿತ್ಸಾ ಸ್ನಾತಕೋತ್ತರ ಪದವಿಗಾಗಿ ಪಠ್ಯಕ್ರಮ ಅಳವಡಿಸುವ ಸಲುವಾಗಿ ಸಮಾಲೋಚನೆ ಮಾಡಲು ಅವರನ್ನು ಆಹ್ವಾನಿಸಲಾಗಿದೆ.