ನಂತರದಲ್ಲಿ ಖಾಸಗಿ ಟಿವಿ ವಾಹಿನಿಯೊಂದು ಖ್ಯಾತ ಜ್ಯೋತಿಷಿ ಮುತ್ತುರಾಜ ಶಾಸ್ತ್ರಿಗಳ ಸಂದರ್ಶನವನ್ನು ನೇರ ಪ್ರಸಾರ ಮಾಡುತ್ತದೆ. ಶಾಸ್ತ್ರಿಗಳು ಶನಿ, ಶುಕ್ರ, ಗುರು, ಮಂಗಳ, ಚಂದ್ರ, ಸೂರ್ಯ ಗ್ರಹಗತಿಗಳು ಸುಮಾರಾಗಿದ್ದು, ನಾಳೆ ಪ್ರಳಯವಾಗುತ್ತದೆ ಎಂದು ಹೇಳುತ್ತಾರೆ. ನಿರೂಪಕಿ ಲೈವ್ ಟೆಲಿಕಾಸ್ಟ್ ಮೂಲಕ ನೇರ ಪ್ರಶ್ನೆಗಳಿಗೆ ಶಾಸ್ತ್ರಿಗಳಿಂದ ಉತ್ತರ ಪಡೆಯುತ್ತಾರೆ. ಒಬ್ಬ ನನ್ನ ಮದುವೆಯಾಗಿ ಎರಡು ತಿಂಗಳಾಗೈತ್ರಿ ಇನ್ನೂ ಹನಿಮೂನಿಗೆ ಹೋಗಿಲ್ಲ. ಪ್ರಳಯಾಗೊದು ಗ್ಯಾರೆಂಟಿ ಏನ್ರಿ ಶಾಸ್ತ್ರಿಗಳೆ ಎಂದು ಕೇಳಿದರೆ, ಮತ್ತೊಬ್ಬ ನನಗೆ ಎಂಎಲ್ಎ ಟೀಕೇಟ್ ಸಿಗೋದೈತ್ರಿ ಹೆಂಗ ಮಾಡಲಿ ಎಂದು ಕೇಳುತ್ತಾನೆ. ಮಗದೊಬ್ಬ ನಾನು ಕೆಇಬಿ ನೌಕರ ಎಲ್ಲಾ ಕಂಬ ಬಿಳುತ್ತಾವೆನ್ರಿ ಎಂದು ಕೇಳುತ್ತಾನೆ. ಇದಕ್ಕೆ ಹಾಸ್ಯ ರೂಪದಲ್ಲಿ ಪಂಡಿತರು ಉತ್ತರಿಸುತ್ತಾರೆ.