ಜಾಮೀನು ದೊರಕಿರುವ ಕಂಪೆನಿಯ ಮಾಜಿ ನೌಕರರೆಂದರೆ ಆಂತರಿಕ ಮುಖ್ಯ ಲೆಕ್ಕ ಪರಿಶೋಧಕ ವಿ.ಎಸ್.ಪ್ರಭಾಕರ ಗುಪ್ತ, ಕಾರ್ಯ ನಿರ್ವಾಹಕರಾದ ಜಿ.ರಾಮಕೃಷ್ಣ, ಡಿ.ವೆಂಕಟಪತಿರಾಜು, ಚ.ಶ್ರೀಶೈಲಂ ಮತ್ತು ಲೆಕ್ಕಪರಿಶೋಧಕ ಸುಬ್ರಮಣಿ ಗೋಪಾಲಕೃಷ್ಣ. ಆಂಧ್ರ ಪ್ರದೇಶ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಈ ಐವರೂ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.