ಮೈಸೂರು: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಅಧ್ಯಕ್ಷ ಡಾ.ಸತ್ಯಮೂರ್ತಿ ಭಟ್ ಅವರಿಗೆ ರಾಜ್ಯ ಸಚಿವರ ಸ್ಥಾನಮಾನವನ್ನು ನೀಡಿ ರಾಜ್ಯ ಸರ್ಕಾರ ಈಚೆಗೆ ಆದೇಶ ಹೊರಡಿಸಿದೆ.
ಡಾ. ಸತ್ಯಮೂರ್ತಿ ಭಟ್ ಅವರು ಮಂಡಳಿ ಅಧ್ಯಕ್ಷರಾಗಿ ಈಗಾಗಲೇ ಒಂದು ವರ್ಷ ಕಳೆದಿದೆ. ಇನ್ನೂ ನಾಲ್ಕು ವರ್ಷ ಅವರ ಅಧಿಕಾರದ ಅವಧಿ ಇದೆ. ನಲ್ವತ್ತು ವರ್ಷಗಳಿಂದ ಮಂಡಳಿ ಅಸ್ತಿತ್ವದಲ್ಲಿ ಇದ್ದರೂ ಇದೇ ಮೊದಲ ಬಾರಿಗೆ ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡಲಾಗಿದೆ.