‘ಉದ್ಘಾಟನೆಯ ಸಂದರ್ಭದಲ್ಲಿ ಅಧ್ಯಕ್ಷರ ಪರವಾಗಿ ಮಾತನಾಡುವ ಅವಕಾಶ ನೀಡಿದ್ದರೆ ನನ್ನ ವಿಚಾರಗಳನ್ನು ಅಲ್ಲಿಯೇ ಸ್ಪಷ್ಟಪಡಿಸುವ ಉದ್ದೇಶ ನನಗೆ ಇತ್ತು’ ಎಂದಿದ್ದಾರೆ. ಅವರು ಆಗ ಆಡಬಹುದಾಗಿದ್ದ ಮಾತುಗಳನ್ನು ‘ಸಮಾಜ’ ಕುರಿತ ಉಪನ್ಯಾಸದ ಸಂದರ್ಭದಲ್ಲಿಯೇ ಹೇಳಬಹುದಿತ್ತಲ್ಲ? ಗೌರವ ಸ್ವೀಕಾರಕ್ಕೆ ಬರದ ಮೈಲಿಗೆ ಉಪನ್ಯಾಸಕ್ಕೆ ಬಂದುಬಿಟ್ಟಿತೇ?
ಸಾಹಿತ್ಯ ಸಮಾರಂಭಗಳಿಗೆ ರಾಜಕಾರಣಿಗಳು ಗೈರುಹಾಜರಾಗಿದ್ದನ್ನು ಕುರಿತು ತಮ್ಮ ಎಂದಿನ ವ್ಯಂಗ್ಯದಲ್ಲಿ ‘ಸಾಹಿತ್ಯ ವೇದಿಕೆಗೆ ಬಂದು, ವೇದಿಕೆಯನ್ನು ಮೈಲಿಗೆ ಮಾಡಬಾರದು ಎಂಬ ಕಾರಣದಿಂದ ಅವರು ಬಂದಿಲ್ಲ’ ಎಂದು ಬೆಂಗಳೂರಿನಲ್ಲಿ ಹೇಳಿದ್ದರು. ಈಗ ಸನ್ಮಾನಕ್ಕೆ ಮೈಲಿಗೆ ಪ್ರಶ್ನೆ ಬರಲಿಲ್ಲ, ಸಮಾಜ ಕುರಿತ ಉಪನ್ಯಾಸಕ್ಕೆ ಬಂತು. ಇದು ಯಾವ ನೀತಿ? ದಸರಾ ಉತ್ಸವದ ಉದ್ಘಾಟನೆಯ ಸಂದರ್ಭದಲ್ಲೂ ಅವರು ‘ಪೂಜೆಗೆ ಗೈರು, ಉದ್ಘಾಟನೆಗೆ ಹಾಜರು’ ಎಂಬಂತೆ ಹಿಂಬದಿಯಿಂದ ವೇದಿಕೆ ಹತ್ತಿದ್ದರು. ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲವೇ?
–ತ್ರಿವೇಣಿ, ಬೆಂಗಳೂರು.