ನವದೆಹಲಿ (ಪಿಟಿಐ): `ನಿಜವಾದ ಫಲಾನುಭವಿಗಳಿಗೆ ಲಭಿಸದ ಡೀಸೆಲ್, ಸೀಮೆಎಣ್ಣೆ ಹಾಗೂ ಎಲ್ಪಿಜಿ ಮೇಲಿನ ಸಬ್ಸಿಡಿ ರದ್ದುಪಡಿಸಬೇಕು~ ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವ ಜೈರಾಂ ರಮೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
`ಇವುಗಳ ಸಬ್ಸಿಡಿಯ ಪ್ರಮಾಣ ರೂ 1.90 ಲಕ್ಷ ಕೋಟಿಗಳಾಗಿದ್ದು ಗ್ರಾಮೀಣ ಅಭಿವೃದ್ಧಿ ಮತ್ತು ಕುಡಿಯುವ ನೀರು ಸಚಿವಾಲಯಗಳ ಸಂಪೂರ್ಣ ಬಜೆಟ್ ಪ್ರಮಾಣ ರೂ 99,000 ಮಾತ್ರವಿದೆ~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.