ಭಾನುವಾರ ಇಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ `ಆರ್ಥಿಕ ಸೇರ್ಪಡೆ~ಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. `ದೊಡ್ಡ ಪ್ರಮಾಣದ ಸಬ್ಸಿಡಿ ಮೊತ್ತವು ಬಡವರನ್ನು ತಲುಪದೆ ಸೋರಿಕೆಯಾಗುತ್ತಿದೆ. ಈ ಹಣವು ಸೂಕ್ತ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವುದು ಅತ್ಯಂತ ಕಳವಳಕಾರಿ ಸಂಗತಿ. ಸಬ್ಸಿಡಿಗಾಗಿ ಸರ್ಕಾರ ಗರಿಷ್ಠ ಮೊತ್ತ ವ್ಯಯಿಸುತ್ತಿದ್ದರೂ, ಇದು ಪೋಲಾಗುತ್ತಿದೆ ಎಂದು ಯೋಚಿಸುವಾಗ, ವಿತ್ತ ಸಚಿವನಾಗಿ ನನಗೆ ರಾತ್ರಿ ನಿದ್ರೆಯೇ ಬರುವುದಿಲ್ಲ~ ಎಂದು ಹೇಳಿದ್ದಾರೆ.