ಚಿಕ್ಕಬಳ್ಳಾಪುರ: ಮುಖ್ಯ ಅತಿಥಿಗಳ ಭಾಷಣ ಮುಗಿದ ನಂತರ ನಿಗದಿಯಾಗಿದ್ದ ಗುರುವಂದನಾ ಕಾರ್ಯಕ್ರಮ ನಡೆಯಲಿಲ್ಲ. ತುಮಕೂರು ಜಿಲ್ಲೆ ಬಳಿಯ ಮಾಯಸಂದ್ರದ ಆದಿಚುಂಚನಗಿರಿ ಶಾಖಾ ಮಠದ ಶಿವಕುಮಾರನಾಥ ಸ್ವಾಮೀಜಿ ನಿಧನರಾದ ಕಾರಣ ಮೌನಾಚರಣೆ ಮಾಡುವ ಮೂಲಕ ಕಾರ್ಯಕ್ರಮ ಕೊನೆಗೊಳಿಸಲಾಯಿತು.
ಅದ್ದೂರಿಯಾಗಿ ನಡೆಸಲು ಉದ್ದೇಶಿಸಿದ್ದ ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು, ಗುರುಗಳನ್ನು ವಿಶೇಷವಾಗಿ ಸನ್ಮಾನಿಸುವ ಅವಕಾಶ ತಪ್ಪಿದ್ದರಿಂದ ಬೇಸರಿಸಿಕೊಂಡು ಹಿಂತಿರುಗಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಮೌನಾಚರಣೆ ನಡೆಸುವ ಮೂಲಕ ಸ್ವಾಮೀಜಿ ಆತ್ಮಕ್ಕೆ ಶಾಂತಿ ಕೋರಿದರು.