ಹಿಂದೆ ನಗರದ ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಕೃಷಿಗೆ ಬಳಸಲಾಗುತ್ತಿತ್ತು. ಆದರೆ, ದಿನ ಕಳೆದಂತೆ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಹೆಚ್ಚಾಗಿ, ಕಸದ ಸಮರ್ಪಕ ವಿಂಗಡಣೆಯಾಗದೇ ಸಮಸ್ಯೆ ಹೆಚ್ಚಾಗಿದೆ. ಸಮರ್ಪಕ ಕಸ ವಿಂಗಡಣೆಯೇ ಸದ್ಯ ಈ ಸಮಸ್ಯೆಗೆ ಪರಿಹಾರ' ಎಂದು ಅವರು ಹೇಳಿದರು.
`ಘನತ್ಯಾಜ್ಯದಿಂದ ಬಯೊಗ್ಯಾಸ್ ಉತ್ಪಾದನೆ ಮಾಡುವಲ್ಲಿ ಚೀನಾ ಮುಂಚೂಣಿಯಲ್ಲಿದೆ. ತ್ಯಾಜ್ಯವನ್ನು ಸರಿಯಾಗಿ ವಿಂಗಡಣೆ ಮಾಡಿ, ಗೊಬ್ಬರ, ಬಯೊಗ್ಯಾಸ್ ಉತ್ಪಾದನೆಗೆ ತೊಡಗಬೇಕು. ತ್ಯಾಜ್ಯದ ಸಮಸ್ಯೆ ಈಗಾಗಲೇ ಹೆಚ್ಚಾಗಿದೆ. ಇದನ್ನು ಸರಿಯಾಗಿ ನಿರ್ವಹಿಸದೆ ಹೀಗೇ ಬಿಟ್ಟರೆ ಇದು ಇನ್ನಷ್ಟು ಜಟಿಲವಾಗಲಿದೆ' ಎಂದು ಕಳವಳ ವ್ಯಕ್ತಪಡಿಸಿದರು.
`ಕಸದ ವಿಲೇವಾರಿ ಸಮರ್ಪಕವಾಗಿ ಆಗದೇ ಹೋದರೆ ಕಸಕ್ಕೆ ಬೆಂಕಿ ಹಾಕುವುದು ಹೆಚ್ಚಾಗುತ್ತದೆ. ಪ್ಲಾಸ್ಟಿಕ್, ಆಸ್ಪತ್ರೆ ಹಾಗೂ ಕೈಗಾರಿಕೆಗಳ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಹೊರಡುವ ಹೊಗೆ ಆರೋಗ್ಯಕ್ಕೆ ಅಪಾಯಕಾರಿ. ಅಲ್ಲದೇ ಮಳೆ ಬಂದು ದ್ರವರೂಪದ ತ್ಯಾಜ್ಯ ನೀರಿನ ಮೂಲಗಳನ್ನು ಸೇರಿ ಅವುಗಳೂ ಮಲಿನಗೊಳ್ಳುತ್ತವೆ. ಈ ಎಲ್ಲ ಅಪಾಯಗಳನ್ನು ತಪ್ಪಿಸಲು ನಗರದ ನಾಗರಿಕರೆಲ್ಲರೂ ತ್ಯಾಜ್ಯ ವಿಂಗಡಣೆಗೆ ಗಂಭೀರವಾಗಿ ಪ್ರಯತ್ನಿಸಬೇಕು' ಎಂದರು.