ಬೆಂಗಳೂರು: ‘ಸರ್ಕಾರ ಗಿರಣಿಗಳ ಮಾಲೀಕರ ಜೊತೆ ಸಮಾಲೋಚಿಸಿ ಶೀಘ್ರ ಸರಿಯಾದ ಲೆವಿ ಪ್ರಮಾಣ ವನ್ನು ನಿಗದಿಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
‘ಸರ್ಕಾರವು ಅಕ್ಕಿ ಗಿರಣಿಗಳಿಂದ 2013–14ನೇ ಸಾಲಿನಲ್ಲಿ 13 ಲಕ್ಷ ಟನ್ಗಿಂತಲೂ ಹೆಚ್ಚು ಅಕ್ಕಿಯನ್ನು ಲೆವಿ ಮೂಲಕ ಸಂಗ್ರಹಿಸುವ ಗುರಿ ಹೊಂದಿದೆ.
ಸರ್ಕಾರದ ಈ ಕ್ರಮ ಅವೈಜ್ಞಾನಿಕವಾದುದ್ದು. ಈ ಕೆಟ್ಟ ಲೆವಿ ಪದ್ಧತಿಯನ್ನು ರಾಜ್ಯದಲ್ಲಿ ರದ್ದುಪಡಿಸಬೇಕು ಎಂದು ಸೋಮ ವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.