ಪಟ್ಟಣದ ನದಿದಡ ಆಂಜನೇಯಸ್ವಾಮಿ ದೇಗುಲದಲ್ಲಿ ತಾಲ್ಲೂಕು ಛಾಯಾಗ್ರಾಹಕರ ಸಂಘ ಮಂಗಳವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಛಾಯಾಗ್ರಾಹಕರು ಆರ್ಥಿಕವಾಗಿ ಹಿಂದುಳಿದಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ವೃತ್ತಿ ತೆರಿಗೆ ವಿಧಿಸಲು ಹೊರಟಿರುವುದು ಸರಿಯಲ್ಲ ಎಂದರು.
ವಿವಿಧ ಕಾಮಗಾರಿಗಳಿಗೆ ಛಾಯಾಚಿತ್ರಗಳನ್ನು ತೆಗೆಯಲು ಮೊದಲು ಛಾಯಾಗ್ರಾಹಕರಿಗೆ ಅವಕಾಶವಿತ್ತು ಆದರೆ ಈಗ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳೇ ಡಿಜಿಟಲ್ ಕ್ಯಾಮೆರಾ ಇಟ್ಟುಕೊಂಡು ಕಾಮಗಾರಿಗಳ ಫೋಟೋ ತೆಗೆಯುವುದರಿಂದ ನಮಗೆ ಅವಕಾಶ ಇಲ್ಲದಂತಾಗಿದೆ ಎಂದರು.
ಉಪಾಧ್ಯಕ್ಷ ಧರಣೇಂದ್ರ ಜೈನ್ ಮಾತನಾಡಿ, ವಿವಿಧ ಕಾಮಗಾರಿಗಳ ಫೋಟೋ ತೆಗೆಯುವುದಕ್ಕೆ ಸ್ಥಳೀಯ ಛಾಯಾಗ್ರಾಹಕರಿಗೆ ಅವಕಾಶ ನೀಡಿ ಸಹಕರಿಸಬೇಕು ಎಂದರು.
ತಾಲ್ಲೂಕು ಛಾಯಾಗ್ರಾಹಕರ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿ.ಎ.ಪ್ರದೀಪ್ (ಅಧ್ಯಕ್ಷ), ಧರಣೇಂದ್ರ ಜೈನ್ (ಉಪಾಧ್ಯಕ್ಷ), ನಾಗರಾಜ್ (ಪ್ರಧಾನ ಕಾರ್ಯದರ್ಶಿ), ಷೇಕ್ ವಾಲಿ (ಸಹ ಕಾರ್ಯದರ್ಶಿ), ಚನ್ನೇಗೌಡ (ಖಜಾಂಚಿ), ಸುಬ್ರಹ್ಮಣಿ, ಸುನೀಲ್ ಕುಮಾರ್ (ಸಂಚಾಲಕರು), ತಿಮ್ಮಪ್ಪ, ಲಕ್ಷ್ಮೀನಾರಾಯಣ, ಮಂಜುನಾಥ್, ಪ್ರಭಾಕರ ಗೌಡ, ಉಮಾಶಂಕರ್, ಸತೀಶ್ ಕುಮಾರ್, ಜಯರಾಮೇಗೌಡ, ಸಮೀಉಲ್ಲಾ, ಅಂಜಿನೇಗೌಡ (ನಿರ್ದೇಶಕರು) ಅವಿರೋಧವಾಗಿ ಆಯ್ಕೆಯಾದರು.