ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ 6 ವರ್ಷಗಳ ಕಾಲ ಮರ್ಲೆ, ಅಂಬಳೆ ರಸ್ತೆ, ಹೆಜ್ಜಗೇನಹಳ್ಳಿ ರಸ್ತೆ ಸೇರಿದಂತೆ ಹಲವು ಪ್ರದೇಶದ ರಸ್ತೆಗಳನ್ನು ಗುತ್ತಿಗೆ ಮಾಡಿದ್ದು ತಾವೆ ಎಂಬುದನ್ನು ಶಾಂತೇಗೌಡರು ಜನರಿಗೆ ತಿಳಿಸಬೇಕು. ಆ ಕಾಮಗಾರಿಗಳು ಕಳಪೆಯಾಗಿದ್ದರೆ ಅದಕ್ಕೆ ಅವರೇ ಹೊಣೆ ಎಂಬುದನ್ನು ಮರೆಯ ಬಾರದು. ಆರೋಪ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದರು.
ಹಿರೇಮಗಳೂರು ಜಗದೀಶ್, ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ, ಮಾಜಿ ಸದಸ್ಯ ಎಚ್.ಜೆ.ಜಾನಯ್ಯ, ಮುಖಂಡರಾದ ಸಿ.ಎಸ್.ರಂಗನಾಥ್, ವರಸಿದ್ದಿ ವೇಣುಗೋಪಾಲ್, ಸಿಡಿಎ ಸದಸ್ಯ ಮಂಜುನಾಥ್, ರೇವನಾಥ್, ಆಟೋ ರಾಜು, ಮೋಹನ್ ಇತರರು ಹಾಜರಿದ್ದರು.