ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಮೇಲೆ ಹಿಡಿತ ಉಳಿಸಿಕೊಳ್ಳಲು ಗೆಲುವು ಅಗತ್ಯ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ನಿಕಟ ಪೈಪೋಟಿ ಇದ್ದ ಎರಡು ಪಂದ್ಯಗಳಲ್ಲಿ ಗೆದ್ದ ಭಾರತವು ಸುಸ್ಥಿತಿಯಲ್ಲಿದೆ. ಒತ್ತಡ ಇರುವುದು ನಮ್ಮ ಮೇಲೆ. ನಾಲ್ಕನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಸರಣಿಯ ಮೇಲೆ ಹಿಡಿತ ಉಳಿಸಿಕೊಳ್ಳಲು ಶುಕ್ರವಾರದ ಪಂದ್ಯವು ನಮಗೆ ಮಹತ್ವದ್ದಾಗಿದೆ. 1-2ರಲ್ಲಿ ಹಿನ್ನಡೆ ಅನುಭವಿಸಿದ್ದು ಭಾರಿ ಆಘಾತಕಾರಿ. ಆದರೂ ಈಗಲೇ ನಿರಾಸೆಯಿಂದ ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಮುಂದಿರುವ ಪಂದ್ಯವನ್ನು ಗೆದ್ದ, ಪುಟಿದೆದ್ದು ನಿಲ್ಲಲು ಪ್ರಯತ್ನಿಸುತ್ತೇವೆ. ಮುಂದಿರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ ಈ ಸರಣಿಯಲ್ಲಿ ವಿಜಯ ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಅಗತ್ಯ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.

ವಿಶ್ವಕಪ್‌ಗಾಗಿ ರಚಿಸಿರುವ ತಂಡದ ಬಗ್ಗೆ ನನಗೆ ಸಂತಸವಿದೆ. ಯಾವುದೇ ಪರಿಸ್ಥಿತಿಗೆ ಅಗತ್ಯವಾದಂಥ ಸಂಯೋಜನೆ ಮಾಡುವುದಕ್ಕೆ ನಾಯಕನಿಗೆ ಮುಕ್ತ ಅವಕಾಶ ಸಿಗುವಂತೆ ಮಾಡಲಾಗಿದೆ. ನಾಯಕನಾಗಿ ಈ ಹದಿನೈದು ಆಟಗಾರರನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತೇನೆ ಎನ್ನುವುದೇ ನನ್ನ ಮುಂದಿರುವ ಸವಾಲು. ವಿಶ್ವಕಪ್ ಟೂರ್ನಿಗಾಗಿ ಪ್ರಾಥಮಿಕ ಸಿದ್ಧತೆಗಳು ಆಗಿವೆ. ಯಶಸ್ಸು ನಮ್ಮದಾಗುತ್ತದೆಂದು ನಿರೀಕ್ಷಿಸುತ್ತಿರುವುದೂ ಸಹಜ. ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿನ ಪರಿಸರಕ್ಕೆ ಹೊಂದಿಕೊಂಡು ಆಡುವಷ್ಟು ಸಮರ್ಥ ಆಟಗಾರರು ತಂಡದಲ್ಲಿದ್ದಾರೆ. ಆದರೆ ಈ ಹಿಂದೆ ವಿಶ್ವಕಪ್‌ನಲ್ಲಿ ಆಡಿದ ಅನುಭವ ಹೊಂದಿದವರು ಬಹಳ ಕಡಿಮೆ. ಆದರೂ ಹೊಸಸವಾಲನ್ನು ನಿಭಾಯಿಸುವ ಛಲವಂತೂ ಪ್ರತಿಯೊಬ್ಬರಲ್ಲಿಯೂ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT