ಭಾರತದ ಸುಪ್ರೀಂಕೋರ್ಟ್ ಪಾಕಿಸ್ತಾನದ ಸೂಕ್ಷ್ಮ ರೋಗಾಣು ತಜ್ಞ ಖಲೀಲ್ ಚಿಸ್ತಿ ಬಿಡುಗಡೆ ಮಾಡಿರುವುದಕ್ಕೆ ಪ್ರತಿಯಾಗಿ ಸರಬ್ಜಿತ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಒಂದು ಲಕ್ಷ ಭಾರತೀಯರು ಸಹಿ ಮಾಡಿದ ಪತ್ರವನ್ನು ಹೊಸ ಕ್ಷಮಾದಾನ ಅರ್ಜಿಗೆ ಲಗತ್ತಿಸಲಾಗಿದೆ. ಕ್ಷಮಾದಾನ ಅರ್ಜಿಯ ಜತೆ ಸ್ವತಃ ಸರಬ್ಜಿತ್ ಅವರು ಎರಡು ಪುಟಗಳ ಪತ್ರವನ್ನು ಜರ್ದಾರಿ ಅವರಿಗೆ ಬರೆದಿದ್ದಾರೆ ಎಂದು ಅವರ ವಕೀಲ ಒವೈಸಿ ಶೇಖ್ ತಿಳಿಸಿದ್ದಾರೆ.