ರಾಜ್ಯದ ಇಬ್ಬರು ಮಹಿಳೆಯರು ಮಾತ್ರ ಲೋಕಸಭೆಗೆ ಸತತ ಮೂರು ಬಾರಿ (ಹ್ಯಾಟ್ರಿಕ್) ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ಸಿನ ಸರೋಜಿನಿ ಮಹಿಷಿ 1962ರಿಂದ 1977ರವರೆಗೆ ಧಾರವಾಡ ಉತ್ತರ ಕ್ಷೇತ್ರದ ಸಂಸದೆಯಾಗಿದ್ದರು. ಕಾಂಗ್ರೆಸ್ಸಿನ ಬಸವರಾಜೇಶ್ವರಿ 1984ರಿಂದ 1991ರ ನಡುವಿನ ಅವಧಿಯಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿದ್ದರು. ಇವರನ್ನು ಬಿಟ್ಟರೆ ಚಿಕ್ಕಮಗಳೂರು ಕ್ಷೇತ್ರದಿಂದ ತಾರಾದೇವಿ ಸಿದ್ಧಾರ್ಥ ಮಾತ್ರ ಸತತ ಎರಡು ಬಾರಿ ಆಯ್ಕೆಯಾಗಿರುವ ಮಹಿಳೆ.