ಜನಲೋಕಪಾಲ್ ಮಸೂದೆಯನ್ನು ಪಾಸ್ ಮಾಡುವುದಾಗಿ ಬಿಜೆಪಿ ಒಂದು ವೇಳೆ ಲಿಖಿತ ಭರವಸೆ ನೀಡಿದರೆ, ಆಮ್ ಆದ್ಮಿ ಪಕ್ಷ ಅವರಿಗೆ ಬೆಂಬಲ ನೀಡುವ ಬಗ್ಗೆ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಭೂಷಣ್ ಸೋಮವಾರ ರಾತ್ರಿ ಸುದ್ದಿವಾಹಿಯೊಂದಕ್ಕೆ ತಿಳಿಸಿದ್ದರು.
ಸೋಮವಾರದ ಹೇಳಿಕೆಗೆ ಮಂಗಳವಾರ ಸ್ಪಷ್ಟೀಕರಣ ನೀಡಿರುವ ಖ್ಯಾತ ವಕೀಲರೂ ಆಗಿರುವ ಭೂಷಣ್, ‘ನಾನು ನಿನ್ನೆ ನೀಡಿದ್ದು ಸಾಂದರ್ಭಿಕ ಹೇಳಿಕೆ. ಒಂದು ವೇಳೆ ಬಿಜೆಪಿ, ಎಎಪಿಯಂತಾದರೆ ಮತ್ತು ಯಾವ ಉದ್ದೇಶಗಳಿಗಾಗಿ ಎಎಪಿ ಜನ್ಮ ತಳೆದಿದೆ ಮತ್ತು ಯಾವುದನ್ನು ಅದು ನಂಬಿದೆಯೊ ಅವುಗಳನ್ನು ಬಿಜೆಪಿ ಮಾಡಿದರೆ ನಾವು ಬೆಂಬಲ ನೀಡುವ ಬಗ್ಗೆ ಯೋಚಿಸುತ್ತೇವೆ ಎಂಬುದು ಅದರ ಅರ್ಥ. ಆದರೆ ಈ ಪಕ್ಷಗಳು ಎಂದಿಗೂ ಎಎಪಿಯಂತೆ ಆಗುವುದಿಲ್ಲವಾದ್ದರಿಂದ ಇದು ಸಾಧ್ಯವಿಲ್ಲ’ ಎಂದಿದ್ದಾರೆ.