ಕೊಪ್ಪಳ: ಸರ್ಕಾರಿ ನೌಕರರಿಗಾಗಿ ಬುಧವಾರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಶಿಬಿರಕ್ಕೆ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಚಾಲನೆ ನೀಡಿದರು.
“ಇಲಾಖೆ ಹೊಂದಿರುವ ಸಿಬ್ಬಂದಿಯನ್ನಲ್ಲದೇ ನೆರೆಯ ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಯ ತಜ್ಞವೈದ್ಯರನ್ನು ಸಹ ಈ ಶಿಬಿರಕ್ಕೆ ಆಹ್ವಾನಿಸಲಾಗಿದೆ” ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಸ್.ಕೆ.ದೇಸಾಯಿ, ಹೇಳಿದರು.
“ಶಿಬಿರದಲ್ಲಿ 16 ಜನ ತಜ್ಞರು, 15 ಜನ ವೈದ್ಯರು, 10 ಜನ ಶುಶ್ರೂಷಕಿಯರು ಹಾಗೂ 20 ಜನ ಪ್ರಯೋಗಾಲಯ ತಂತ್ರಜ್ಞರು ಸೇರಿದಂತೆ ಒಟ್ಟು 90 ಜನ ಪಾಲ್ಗೊಂಡಿದ್ದಾರೆ. ಆಯುಷ್ ವೈದ್ಯರು ಸಹ ತಪಾಸಣೆ ನಡೆಸಿ, ಸಲಹೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದರು.
ರಕ್ತ, ಮೂತ್ರ, ಇ.ಸಿ.ಜಿ ಪರೀಕ್ಷೆಗಳನ್ನು ಉಚಿತವಾಗಿ ನೆರವೇರಿಸಲಾಗುತ್ತಿದೆ ಎಂದರು. ಶಿಬಿರದಲ್ಲಿ 328 ಪುರುಷರು, 79 ಮಹಿಳೆಯರು ಒಟ್ಟು 407 ನೌಕರರ ಆರೋಗ್ಯ ತಪಾಸಣೆ ನಡೆಸಲಾಯಿತು.