ಡಾ.ರೋರಿಚ್ ದೇವಿಕಾರಾಣಿ ಎಸ್ಟೇಟ್ನ ಅಧಿಕಾರಿ ಮನು ಬಳಿಗಾರ್, ‘ಜಾತಿ, ವರ್ಗ ಮತ್ತು ಧರ್ಮರಹಿತವಾದ ಸಮಾನ ಸಮಾಜದ ಕಲ್ಪನೆಯ ಕುರಿತು ಸರ್ವಜ್ಞ ಕವಿಯು ಸುಮಾರು 500 ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದರು. ಅಂತಹ ಮಹಾನ್ ವ್ಯಕ್ತಿಯ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಸರ್ಕಾರ ಸರ್ವಜ್ಞನ ಹೆಸರಿನಲ್ಲಿ ಅಂಚೆ ಚೀಟಿಯನ್ನು ಹೊರ ತರಲು ಕ್ರಮಕೈಗೊಳ್ಳಬೇಕ’ ಎಂದರು. ಬಿಬಿಎಂಪಿ ಸದಸ್ಯರಾದ ಎ.ಕೋದಂಡರೆಡ್ಡಿ, ಎಂ.ಸಿ.ಶ್ರೀನಿವಾಸ್, ಆರ್.ರಾಜೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಮಾರ್ಕಂಡಪುರಂ ಶ್ರೀನಿವಾಸ್ ಉಪಸ್ಥಿತರಿದ್ದರು.