ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಹಾಯ ಮಾಡಿದ್ದು `ಪ್ರಜಾವಾಣಿ'

`ಪ್ರಜಾವಾಣಿ' ಸ್ಕಾಲರ್‌ಶಿಪ್ ಪಡೆದವರ ಅಭಿಮತ
Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಆರು  ಹೆಣ್ಣು ಮಕ್ಕಳಿರುವ ಬಡ ರೈತನ ಮಗಳಾದ ನನಗೆ ಓದು ಮುಂದುವರಿಸುವ ಭಾಗ್ಯ ಸಿಕ್ಕಿದ್ದು `ಪ್ರಜಾವಾಣಿ'ಯ ಉದಾರ ಧನ ಸಹಾಯದಿಂದ.

ಪತ್ರಿಕೆಯ ಈ ನೆರವಿನಿಂದ ನನಗೆ ಆಸಕ್ತಿಯಿದ್ದ ವಿಜ್ಞಾನದಲ್ಲಿ ಪ್ರಥಮ ಪಿಯುಸಿ ಓದುವ ಅವಕಾಶ ದೊರೆತು ಮೊದಲ ವರ್ಷದಲ್ಲಿ ಶೇ 78ರಷ್ಟು ಅಂಕ ಗಳಿಸಿದ್ದೇನೆ. ನಮ್ಮನ್ನು ಓದಿಸಲು ಅಪ್ಪನಿಗೆ ತೊಂದರೆಯಾಗುತ್ತದೆಂಬ ಕಾರಣಕ್ಕೆ ಓದು ನಿಲ್ಲಿಸಬೇಕಿದ್ದ ನಾನು, `ಪ್ರಜಾವಾಣಿ' ಯ ಉದಾರ ಕೊಡುಗೆಯ ಫಲಾನುಭವಿಯಾಗಿ ಭವಿಷ್ಯದಲ್ಲಿ ಎಂಜಿನಿಯರ್ ಆಗಬೇಕೆಂಬ ಕನಸನ್ನು ಜೀವಂತವಾಗಿರಿಸಿಕೊಂಡಿದ್ದೇನೆ.

ಸದ್ಯ ನಾನು ಮುಧೋಳದ ವಾಲಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದೇನೆ. `ಪ್ರಜಾವಾಣಿ'ಗೆ ಹಾಗೂ ಬಡವರಿಗೆ ಉದಾರ ಸಹಾಯ ನೀಡುತ್ತಿರುವ ಅದರ ಓದುಗ ಬಳಗಕ್ಕೆ ಕೃತಜ್ಞತೆಗಳು.
-ಸಾವಕ್ಕಾ ಬ.ಗುಡ್ಲಮನಿ ಢವಳೇಶ್ವರ (ಬಾಗಲಕೋಟೆ ಜಿಲ್ಲೆ)


ಪ್ರಜಾವಾಣಿ ಪರಿಹಾರ ನಿಧಿ
ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ
ಉದಾರ ಕೊಡುಗೆ ನೀಡಿ

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್‌ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ. ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ. ಆನ್‌ಲೈನ್ ಮೂಲಕ http://www.careeravenues.in/ dhutility/edurelief.aspx ಈ ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.

ವಿಳಾಸ: ಮ್ಯಾನೇಜರ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪರಿಹಾರ ಟ್ರಸ್ಟ್, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001
ಸೂಚನೆ: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT