ಬೆಂಗಳೂರು: `ವಿದ್ಯಾರಣ್ಯ ಯುವಕ ಸಂಘವು ಗಣಪತಿ ಹಬ್ಬದ ಪ್ರಯುಕ್ತ ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ಸೆ. 9 ರಿಂದ 19 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ' ಎಂದು ಸಂಘದ ವ್ಯವಸ್ಥಾಪಕ ಟ್ರಸ್ಟಿ ಎಸ್.ಎಂ.ನಂದೀಶ್ ಶುಕ್ರವಾರ ತಿಳಿಸಿದರು.
`ಭರತನಾಟ್ಯ, ಕರ್ನಾಟಕ ಸಂಗೀತ, ಹರಿಕಥೆ, ಕೊಳಲು ವಾದನ, ಹಾಸ್ಯ ಸಂಜೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 30 ಅಡಿ ಮರಳಿನ ಗಣಪತಿ ಮೂರ್ತಿಯ ಪ್ರದರ್ಶನವಿದೆ' ಎಂದರು.