ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ: ಅಕ್ಟೋಬರ್ 15,16 ಮತ್ತು 17

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೊಂಬೆ ಹಬ್ಬ
ವಿಜಯನಗರ ಬಿಂಬ ರಂಗಶಾಲೆ: ಶನಿವಾರ ಮತ್ತು ಭಾನುವಾರ `ಬೊಂಬೆ ಹಬ್ಬ~ ಮಕ್ಕಳ ಕಿರು ನಾಟಕೋತ್ಸವ. ಮಕ್ಕಳೇ ಬರೆದು ನಿರ್ದೇಶಿಸಿ, ರಂಗಸಜ್ಜಿಕೆ ಮಾಡಿ ಅಭಿನಯಿಸುತ್ತಿರುವುದು ನಾಟಕ ಪ್ರದರ್ಶನ. ಅಧ್ಯಕ್ಷತೆ: ಡಾ.ಬಿ.ವಿ. ರಾಜಾರಾಂ.
ಸ್ಥಳ: ವಿಜಯನಗರ ಬಿಂಬ, ನಂ 195, 5ಎ ಮುಖ್ಯರಸ್ತೆ, 6ನೇ ಕ್ರಾಸ್, ವಿಜಯನಗರ 2ನೇ ಹಂತ, ಹಂಪಿ ನಗರ. ನಿತ್ಯ ಸಂಜೆ 7.

ರಂಗಶಂಕರ ನಾಟಕೋತ್ಸವ
ರಂಗಶಂಕರ: ಇಂದಿನಿಂದ 23ರ ವರೆಗೆ ನಾಟಕೋತ್ಸವ. ಶನಿವಾರ ಸಂಜೆ 6.45ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ `ಕಟ್ಟೆ ಪುರಾಣ~ ಬೀದಿ ನಾಟಕ ಪ್ರದರ್ಶನ (ರಚನೆ: ಗಂಗಾಧರ ಮೂರ್ತಿ, ನಿರ್ದೇಶನ: ಶಶಿಧರ ಬಾರಿಘಾಟ್). ಒಂದು ಕತ್ತೆ ಮತ್ತು ಅದರ ಯಜಮಾನನ ಕುರಿತ ಕಥೆಯನ್ನು ಈ ನಾಟಕ ಒಳಗೊಂಡಿದೆ.

ಸಂಜೆ 7.30ಕ್ಕೆ ರಂಗಶಂಕರದಲ್ಲಿ ಹೆಗ್ಗೋಡಿನ ನಿನಾಸಂ ತಿರುಗಾಟ ತಂಡದಿಂದ `ಕಂತು~ ಪ್ರದರ್ಶನ (ರಚನೆ: ವಿವೇಕ ಶಾನಭಾಗ, ನಿರ್ದೇಶನ: ಚೆನ್ನಕೇಶವ ಮಂಡ್ಯ).
ಭಾನುವಾರ ಬೆಳಿಗ್ಗೆ 11ಕ್ಕೆ  ಆಕಾರ್ ಪಟೇಲ್, ಡಾ.ಚಂದನ್ ಗೌಡ, ಡಾ. ಅರ್ಷಿಯಾ ಸತ್ತಾರ್ ಅವರಿಂದ ಐಡೆಂಟಿಟಿ, ಅಲೆಜೆನ್ಸ್ ಅಂಡ್ ಏಲಿಯನೇಶನ್ ವಿಷಯ ಕುರಿತು ವಿಚಾರ ಸಂಕಿರಣ. ನಿರ್ವಹಣೆ: ಪ್ರಕಾಶ್ ಬೆಳವಾಡಿ.

ನವದೆಹಲಿಯ ಎನ್‌ಎಸ್‌ಡಿ ರೆಪರ್ಟರಿ ತಂಡದಿಂದ `ಕಾಮ್ರೇಡ್ ಕುಂಭಕರ್ಣ~ ಹಿಂದಿ ನಾಟಕ ಪ್ರದರ್ಶನ (ರಚನೆ: ರಾಮು ರಾಮನಾಥನ್, ನಿರ್ದೇಶನ: ಮೋಹಿತ್ ಟಕಲ್ಕರ್).
ಸ್ಥಳ: ಜೆ.ಪಿ.ನಗರ 2ನೇ ಹಂತ.  ಮಧ್ಯಾಹ್ನ 3.30 ಮತ್ತು ಸಂಜೆ 7.30. ಭಾನುವಾರ ಸಂಜೆ 6.45ಕ್ಕೆ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ `ಐ ಗಾಟ್ ಕಾಟ್~ ಇಂಗ್ಲಿಷ್ ಬೀದಿ ನಾಟಕ ಪ್ರದರ್ಶನ (ರಚನೆ: ಎಸ್. ಅರವಿಂದ್, ನಿರ್ದೇಶನ: ಪ್ರಶಾಂತ ಕುಮಾರ್).

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ಸಹಯೋಗದೊಂದಿಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ವ್ಯಂಗ್ಯಚಿತ್ರ ಪ್ರದರ್ಶನ..

ಪಂಚಮ ಸ್ಕಂದ
ದೇವಗಿರಿ ರಾಘವೇಂದ್ರಸ್ವಾಮಿ ಮಠ: ಬನ್ನಂಜೆ ಗೋವಿಂದಾಚಾರ್ಯ ಅವರಿಂದ ಭಾಗವತ ಪಂಚಮ ಸ್ಕಂದ ಕುರಿತು ಉಪನ್ಯಾಸ. ಸ್ಥಳ: ಬನಶಂಕರಿ 2ನೇ ಹಂತ. ನಿತ್ಯ ಸಂಜೆ 6.30. ಮಾಹಿತಿಗೆ: 26712816

ಕಾಳಿದಾಸನ ರಘುವಂಶ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಡಾ.ರಾ.ಗಣೇಶ್ ಅವರಿಂದ  `ಕಾಳಿದಾಸನ ರಘುವಂಶ~ ಕುರಿತು ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.

ಅಧ್ಯಾಸ ಭಾಷ್ಯಂ
ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿ.ವಿ.ಪುರಂ.
ನಂತರ ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT