ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ ಅಕ್ಟೋಬರ್ 18 ಮತ್ತು 19

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಂಗೀತೋತ್ಸವದಲ್ಲಿ...
ಬೆಂಗಳೂರು ಗಾಯನ ಸಮಾಜ: 43ನೇ ಸಂಗೀತ ಸಮ್ಮೇಳನದಲ್ಲಿ ಮಂಗಳವಾರ ಬೆಳಿಗ್ಗೆ 10ಕ್ಕೆ ಆರ್.ಕೆ. ಪದ್ಮನಾಭ ಅವರಿಂದ `ಮುತ್ತುಸ್ವಾಮಿ ದೀಕ್ಷಿತರ ರಚನೆಗಳಲ್ಲಿ ರಾಗವೈಭವ~, ಸುಕನ್ಯಾ ಪ್ರಭಾಕರ್ ಅವರಿಂದ `ತ್ಯಾಗರಾಜ~ ಮತ್ತು ಟಿ.ಎಸ್. ಸತ್ಯವತಿ ಅವರಿಂದ `ಶ್ಯಾಮಾಶಾಸ್ತ್ರಿ~ಗಳ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆ. ಸಂಜೆ 4.15ಕ್ಕೆ ಪ್ರಿಯಾಂಕ ಸಿ. ಪ್ರಕಾಶ್ ಅವರಿಂದ ಗಾಯನ. ಅನಿರುದ್ಧ (ವಯಲಿನ್), ವಿ.ಕಾರ್ತಿಕ್ (ಮೃದಂಗ). 6.15ಕ್ಕೆ ಎನ್.ವಿಜಯಶಿವ ಅವರಿಂದ ಗಾಯನ.

ಪಕ್ಕವಾದ್ಯದಲ್ಲಿ: ಚಾರುಲತಾ ರಾಮಾನುಜಂ (ವಯಲಿನ್), ಮನೋಜ್ ಶಿವ (ಮೃದಂಗ), ಜಿ.ಗುರುಪ್ರಸನ್ನ (ಖಂಜಿರಾ). ಬುಧವಾರ ಬೆಳಿಗ್ಗೆ 10ಕ್ಕೆ ಸುಗುಣಾ ಪುರುಷೋತ್ತಮ ಅವರಿಂದ `ನೆರವಲ್~, ಆರ್. ವಿಶ್ವೇಶ್ವರನ್ ಅವರಿಂದ `ಗಮಕದಲ್ಲಿ ರಾಗಗಳು~ ಪ್ರಾತ್ಯಕ್ಷಿಕೆ.
ಸಂಜೆ 4.15ಕ್ಕೆ ಕಲಾಧರಿ ಭವಾನಿ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ನಾರಾಯಣಶರ್ಮಾ (ವಯಲಿನ್), ಮೈಸೂರು ಆರ್ ಸುಕೃತ (ಮೃದಂಗ). 6.15ಕ್ಕೆ ಡಾ.ಸುಮಾ ಸುಧೀಂದ್ರ ಅವರಿಂದ ವೀಣಾವಾದನ. ಪಕ್ಕವಾದ್ಯದಲ್ಲಿ: ಬಿ.ರಘುರಾಮ್ (ವಯಲಿನ್), ಬಿ.ಸಿ.ಮಂಜುನಾಥ್ (ಮೃದಂಗ), ನಾರಾಯಣ ಮೂರ್ತಿ (ಘಟ).
ಸ್ಥಳ: ಕೆ.ಆರ್.ರಸ್ತೆ.

ಭಾಗವತದಲ್ಲಿ ವೇದಾಂತ ದರ್ಶನ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಮಂಗಳವಾರ ಗಣೇಶ ಭಟ್ಟ ಹೋಬಳಿ ಅವರಿಂದ `ಭಾಗವತದಲ್ಲಿ ವೇದಾಂತ ದರ್ಶನ~ ಕುರಿತು ಉಪನ್ಯಾಸ. ಬುಧವಾರ ಬಿ.ಆರ್.ಪ್ರಭಾಕರ್ ಅವರಿಂದ `ರಾಮಾಯಣ -ಸೀತಾಚರಿತೆ~ ಕುರಿತು ಉಪನ್ಯಾಸ.
ಸ್ಥಳ: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ನಿತ್ಯ ಸಂಜೆ 6.15.

ಕಾರ್ತಿಕ ದೀಪೋತ್ಸವ
ಇಸ್ಕಾನ್: ತುಪ್ಪದ ದೀಪ ಬೆಳಗುವ ಕಾರ್ಯಕ್ರಮ,  8 ಗಂಟೆಗೆ ಶಯನ ಆರತಿ, 8.30ಕ್ಕೆ ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ಸ್ಥಳ: ಇಸ್ಕಾನ್, ವೆಸ್ಟ್ ಆಫ್ ಕಾರ್ಡ್ ರಸ್ತೆ.

ರಂಗಶಂಕರ ನಾಟಕೋತ್ಸವದಲ್ಲಿ
ರಂಗಶಂಕರ: ರಂಗಶಂಕರ ನಾಟಕೋತ್ಸವದಲ್ಲಿ ಮಂಗಳವಾರ ಎಸ್.ಎ. ಮುದ್ರ ಫೌಂಡೇಶನ್‌ನಿಂದ `ಕೃಷ್ಣ ಸಂಧಾನ~ ಯಕ್ಷಗಾನ ತಾಳಮದ್ದಳೆ (ನಿ: ಪ್ರೊ. ಕೆ.ಇ.ರಾಧಾಕೃಷ್ಣ). ಬುಧವಾರ `ನೀರೊಸ್ ಗೆಸ್ಟ್~ ಇಂಗ್ಲಿಷ್ ಚಲನಚಿತ್ರ. (ನಿ: ದೀಪಾ ಭಾಟಿಯ. ಉಚಿತ ಪ್ರವೇಶ).  ಸ್ಥಳ: ರಂಗಶಂಕರ, ಜೆಪಿ ನಗರ 2ನೇ ಹಂತ. ಸಂಜೆ 7.30.

ಭಾಗವತ ಪಂಚಮಸ್ಕಂದ
ದೇವಗಿರಿ ಶ್ರೀ ಗುರುಸೇವಾ ಸಮಿತಿ: ಬನ್ನಂಜೆ ಗೋವಿಂದಾಚಾರ್ಯರಿಂದ `ಭಾಗವತ ಪಂಚಮಸ್ಕಂದ~ ಕುರಿತು ಉಪನ್ಯಾಸ. ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 6.30.

ಮಹಾಭಾರತ ಪಾತ್ರ ಪ್ರಪಂಚ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಜಯತೀರ್ಥಾಚಾರ್ಯ ಮಳಗಿ ಅವರಿಂದ `ಮಹಾಭಾರತ ಪಾತ್ರ ಪ್ರಪಂಚ~. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.30.

ಸರ್ವಸಮ್ಮತೋಪದೇಶಗಳು
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಪ್ರದೀಪ ಶರ್ಮಾ ಅವರಿಂದ `ಸದ್ಗುರುಗಳ ಗ್ರಂಥದಿಂದ ಸರ್ವಸಮ್ಮತೋಪದೇಶಗಳು~ ಕುರಿತು ಉಪನ್ಯಾಸ. ಸ್ಥಳ: ನಂ.68, ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ನಿತ್ಯ ಬೆಳಿಗ್ಗೆ 9.30.

ಅಧ್ಯಾಸಭಾಷ್ಯಂ
ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ.
ನಂತರ ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT