ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ: ಅಕ್ಟೋಬರ್ 20 ಮತ್ತು 21

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಚಾನಕ್
ಕೆ ವಿ ಸುಬ್ಬಣ್ಣ ಆಪ್ತಸಮೂಹ ಮತ್ತು ಸಂಕುಲ ಥಿಯೇಟರ್ ಇನ್‌ಸ್ಟಿಟ್ಯೂಟ್: ವಿದೇಶದಲ್ಲಿನ ಭಾರತೀಯ ಕುಟುಂಬವೊಂದನ್ನು ಆಧರಿಸಿದ ಕನ್ನಡ ಹಾಸ್ಯ ನಾಟಕ `ಅಚಾನಕ್~ (ನಿರ್ದೇಶನ: ಅಶೋಕ್ ನಿಟ್ಟೂರ್).

ಸ್ಥಳ: ಕೆ ಎಚ್ ಕಲಾಸೌಧ, ರಾಮಾಂಜನೇಯ ದೇವಸ್ಥಾನ ಬಳಿ, ಹನುಮಂತನಗರ. ಸಂಜೆ 7.30. ಮಾಹಿತಿಗೆ: 93412 13345, 99641 52999.

 ರಂಗಶಂಕರ ನಾಟಕೋತ್ಸವದಲ್ಲಿ
ರಂಗಶಂಕರ: ರಂಗಶಂಕರ ನಾಟಕೋತ್ಸವದಲ್ಲಿ ಗುರುವಾರ ಸಂಜೆ 7.30ಕ್ಕೆ ಆರೊನ್ ನ್ಯೂಮನ್ ನಿರ್ದೇಶನದ `ಈಸ್ ನಾಟ್ ದ ಪ್ರಾಬ್ಲಮ್~ ಇರಾನಿ ಚಲನಚಿತ್ರ (ಪ್ರವೇಶ ಉಚಿತ). ಶುಕ್ರವಾರ ಸಂಜೆ 6.45ಕ್ಕೆ ಪಿಇಎಸ್‌ಐಟಿ ತಂಡದಿಂದ `ಇವರ ಪ್ರಾಣ ಯಾರ ಕೈಯಲ್ಲಿ?!~ ಬೀದಿ ನಾಟಕ (ಕಥೆ: ಟಿ. ನಿರಂಜನ. ನಿರ್ದೇಶನ: ಸಹನಾ ಪ್ರಸಾದ್). ಸಂಜೆ 7.30ಕ್ಕೆ ಮುಂಬೈಯ ರಂಗಶೀಲ ಥಿಯೇಟರ್ ಗ್ರೂಪ್‌ನಿಂದ `ತೀಸ್ವಿ ಶತಾಬ್ಧಿ~ ಹಿಂದಿ ನಾಟಕ (ರಚನೆ: ಬಾದಲ್ ಸರ್ಕಾರ್. ನಿರ್ದೇಶನ: ಅವನೀಶ ಮಿಶ್ರಾ).
ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ.

ಭಾಗವತ ಪಂಚಮಸ್ಕಂದ
ದೇವಗಿರಿ ಶ್ರೀ ಗುರುಸೇವಾ ಸಮಿತಿ: ಬನ್ನಂಜೆ ಗೋವಿಂದಾಚಾರ್ಯರಿಂದ `ಭಾಗವತ ಪಂಚಮಸ್ಕಂದ~ ಕುರಿತು ಉಪನ್ಯಾಸ. ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 6.30.

ಮಹಾಭಾರತ ಪಾತ್ರ ಪ್ರಪಂಚ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:ಜಯತೀರ್ಥಾಚಾರ್ಯ ಮಳಗಿ ಅವರಿಂದ `ಮಹಾಭಾರತ ಪಾತ್ರ ಪ್ರಪಂಚ~. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.30.

ಸರ್ವಸಮ್ಮತೋಪದೇಶ
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಗುರುವಾರ ಪ್ರದೀಪ ಶರ್ಮಾ ಅವರಿಂದ ಸದ್ಗುರುಗಳ ಗ್ರಂಥದಿಂದ `ಸರ್ವಸಮ್ಮತೋಪದೇಶಗಳು~, ಶುಕ್ರವಾರ ಸುದರ್ಶನ ಶರ್ಮಾ ಅವರಿಂದ `ಛಾಂದೋಗ್ಯೋಪನಿಷತ್ತು~ ಪ್ರವಚನ.  ಸ್ಥಳ: ನಂ.68, ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ನಿತ್ಯ ಬೆಳಿಗ್ಗೆ 9.30.

ಅಧ್ಯಾಸಭಾಷ್ಯಂ
ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.

ಸೀತಾ ಕಲ್ಯಾಣ
ಶ್ರೀರಂಗಂ ಶ್ರೀಮದ್ ಆಂಡವನ್ ಆಶ್ರಮ: ಕಲ್ಯಾಣಪುರಂ ಅರವಮುದನ್ ಸ್ವಾಮಿ ಅವರಿಂದ `ಸೀತಾ ಕಲ್ಯಾಣ~ ಉಪನ್ಯಾಸ. ಸ್ಥಳ: ಗರುತ್ಮನ್ ಪಾರ್ಕ್, ಆರ್ ವಿ ಟೀಚರ್ಸ್ ಕಾಲೇಜು ಹಿಂಭಾಗ. ಜಯನಗರ. ನಿತ್ಯ ಸಂಜೆ 6.

ಗಾಜಿನ ಕಲಾಕೃತಿ
ಗ್ಯಾಲರಿ ಸುಮುಖ: ಶಿಶಿರ್ ಸಹಾನಾ ಅವರು ಗಾಜಿನಲ್ಲಿ ಮಾಡಿರುವ ಕಲಾಕೃತಿಗಳ ಪ್ರದರ್ಶನ. ಸ್ಥಳ: ನಂ.24/10, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್ ಗಾರ್ಡ್‌ನ್. ಬೆಳಿಗ್ಗೆ 10.30 ರಿಂದ 7.

 ಕಾರ್ತಿಕ ದೀಪೋತ್ಸವ
ಇಸ್ಕಾನ್: ತುಪ್ಪದ ದೀಪ ಬೆಳಗುವ ಕಾರ್ಯಕ್ರಮ,  8 ಗಂಟೆಗೆ ಶಯನ ಆರತಿ, 8.30ಕ್ಕೆ ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ಸ್ಥಳ: ಇಸ್ಕಾನ್, ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT