ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ ಸೆಪ್ಟೆಂಬರ್ 3,4 ಮತ್ತು 5

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸೇವಂತಿ ಪ್ರಸಂಗ
ರಂಗವರ್ತುಲ: ಶನಿವಾರ ಮತ್ತು ಭಾನುವಾರ `ಸೇವಂತಿ ಪ್ರಸಂಗ~ ಕನ್ನಡ ನಾಟಕ (ರಚನೆ: ಜಯಂತ್ ಕಾಯ್ಕಿಣಿ, ವಿನ್ಯಾಸ, ಸಂಗೀತ, ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್). ಸ್ಥಳ; ಕೆ.ಎಚ್.ಕಲಾಸೌಧ, ಹನುಮಂತನಗರ. ಟಿಕೆಟ್ ಬೆಲೆ: 50 ರೂ. ಮಾಹಿತಿಗೆ: 99868 28680.

ವೇದಾಂತ ಪರಿಭಾಷೆ
ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಶುಕ್ರವಾರ ಮಂಜುನಾಥ ಭಟ್ ವಿನಾಯಕ ಅವರಿಂದ `ವೇದಾಂತ ಪರಿಭಾಷೆಗಳು ಮತ್ತು ಪರಿಚ್ಛೇದಗಳು~ ಕುರಿತು ಪ್ರವಚನ. ಸ್ಥಳ: ರಾಗಿಗುಡ್ಡ ದೇವಸ್ಥಾನ, 9ನೇ ಬ್ಲಾಕ್, ಜಯನಗರ. ನಿತ್ಯ ಸಂಜೆ 6.30.

ಗೋಧಿ ಹುಗ್ಗಿ ಗಂಗಯ್ಯ
ಶಾರದ ಗಾನ ಕಲಾ ಮಂದಿರ ಟ್ರಸ್ಟ್: ಶನಿವಾರ ಭಾನುವಾರ ಪ್ರೊ.ಜಿ.ಎಚ್. ಹನ್ನೆರಡುಮಠ ಅವರ `ಗೋಧಿ ಹುಗ್ಗಿ ಗಂಗಯ್ಯ~ ಸಂಗೀತ ನೃತ್ಯ ಪ್ರಧಾನ ಜಾನಪದ ನಾಟಕ (ನಿರ್ದೇಶನ: ಅಜೇಯ ಪಿ. ಪ್ರೀತಂ). ಸ್ಥಳ: 81, 1ನೇ ಮಹಡಿ, ಪೂರ್ವ ಆಂಜನೇಯ ಬೀದಿ, ಬಸವನಗುಡಿ (ಪುಳಿಯೊಗರೆ ಪಾಯಿಂಟ್ ಮೇಲೆ). ಟಿಕೇಟ್ ದರ 50 ರೂ. ಮಾಹಿತಿಗೆ: 99867 06454, 88845 71521

ಹರಿವಂಶ ಪುರಾಣ
ಶ್ರೀಪಾರ್ಥಸಾರಥಿ ದೇವರ 25ನೇ ಪ್ರತಿಷ್ಠಾ ವರ್ಷಾಚರಣೆಯ ಪ್ರಯುಕ್ತ ಶನಿವಾರ ಮತ್ತು ಭಾನುವಾರ ಡಾ.ಮಾಳಗಿ ರಾಮಾಚಾರ್ ಅವರಿಂದ ಹರಿವಂಶ ಮಹಾಪುರಾಣದ ಪ್ರವಚನ. ಸ್ಥಳ: ಕಾಶಿ ಮಠ, ನೆಟ್ಟಕಲ್ಲಪ್ಪ ವೃತ್ತ. ಸಂಜೆ 6.

ನೃತ್ಯೋತ್ಸವದಲ್ಲಿ
ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ: ಗೋಕುಲಾಷ್ಟಮಿ ಹಬ್ಬದ  ಪ್ರಯುಕ್ತ ಸಂಗೀತ ಮತ್ತು ನೃತ್ಯೋತ್ಸವದಲ್ಲಿ ಶನಿವಾರ  ಎನ್.ಶ್ರೀಮತಿ ಜಯರಾಮ್ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ಸಿ.ಎನ್.ಚಂದ್ರಶೇಖರ್ (ಪಿಟೀಲು), ಸಿ.ಚೆಲುವರಾಜ್ (ಮೃದಂಗ). ಭಾನುವಾರ ಉತ್ಸವ. ಸೋಮವಾರ ಪಲ್ಲಕ್ಕಿ ಉತ್ಸವ. ಸ್ಥಳ: ವೇಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ರಸ್ತೆ (11ನೇ ಅಡ್ಡ ರಸ್ತೆ). ನಿತ್ಯ ಸಂಜೆ 6.30.

ರಂಗಶಂಕರದಲ್ಲಿ
ರಂಗಶಂಕರ: ಶನಿವಾರ ಮತ್ತು ಭಾನುವಾರ ಸಿಎಫ್‌ಡಿ ಬೆಂಗಳೂರು ತಂಡದಿಂದ `ಭಕ್ತಿ ಇತಿಹಾಸ್- ದ ಅದರ್ ಸೈಡ್ ಆಫ್ ಹಿಸ್ಟರಿ~ ಇಂಗ್ಲಿಷ್ ನಾಟಕ (ರಚನೆ: ಬಾದಲ್ ಸರ್ಕಾರ್. ನಿರ್ದೇಶನ: ಪ್ರಕಾಶ್ ಬೆಳವಾಡಿ) ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ನಿತ್ಯ ಸಂಜೆ 3.30 ಮತ್ತು 7.30. ಮಾಹಿತಿಗೆ: 99868 63615.

ರಥೋತ್ಸವ
ಶ್ರೀ ನಾಗಮ್ಮ ದೇವಿ ದೇವಸ್ಥಾನ: ಶನಿವಾರ ಬೆಳಿಗ್ಗೆ ಶನೇಶ್ವರಸ್ವಾಮಿಗೆ ವಿಶೇಷ ಪೂಜೆ. ಸಂಜೆ 7ಕ್ಕೆ ಸ್ವಾಮಿಗೆ ಆಜ್ಯ ದೀಪಾರಾಧನೆ. ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 10ರವರೆಗೆ ನಾಗಮ್ಮ ದೇವಿ ರಥೋತ್ಸವ. ಸೋಮವಾರ ಸಂಜೆ7 ರಿಂದ ಉಂಜಲ್ ಸೇವಾ, ಪುಷ್ಪಯಾಗಂ, ಕಂಕಣ ವಿಸರ್ಜನೆ. ಸ್ಥಳ: ಸೇಂಟ್ ಜಾನ್ ರಸ್ತೆ.

 ದ್ವಾದಶ ಸ್ತೋತ್ರ
ದೇವಗಿರಿ ಶ್ರೀ ಗುರುಸೇವಾ ಸಮಿತಿ: ಅಂಬರೀಷಾ ಚಾರ್ಯ  ಅವರಿಂದ `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ. ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 7.

ಅಧ್ಯಾಸಭಾಷ್ಯಂ
ವೇದಾಂತ ಸತ್ಸಂಗ ಕೇಂದ್ರ:  ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.

ಗೀತಾ ಪ್ರವಚನ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಗಣೇಶ್ ಭಟ್ಟ ಹೋಬಳಿ ಅವರಿಂದ ಭಗವದ್ಗೀತೆ (ಮುಂದುವರಿದ ಭಾಗ) ಉಪನ್ಯಾಸ. ಸ್ಥಳ: ಡಿವಿಜಿ ಸಭಾಂಗಣ, ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. ಸಂಜೆ 6.30.

ಪ್ರೋಷ್ಠಪದಿ ಭಾಗವತ
ಶ್ರೀ ಮದಾನಂದತೀರ್ಥ ಪ್ರವಚನ ಸಮಿತಿ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ `ಪ್ರೋಷ್ಠಪದಿ ಭಾಗವತ~ ಪ್ರವಚನ. ಸ್ಥಳ;ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರಜ್ಯೋತಿನಗರ. ಸಂಜೆ 7.

ಭಾಗವತ
ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಸನ್ನಿಧಾನ:  ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ  `ಪ್ರೋಷ್ಠಪದಿ ಭಾಗವತ ಪ್ರವಚನ~. ಸ್ಥಳ: ಶ್ರೀ ರಾಘವೇಂದ್ರ ಮಠ, ಇಟ್ಟುಮಡು. ಸಂಜೆ 7.30.

 `ಧರ್ಮ~ ಪ್ರವಚನ
ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ: ದಶಲಕ್ಷಣ ಮಹಾಪರ್ವದಲ್ಲಿ ಶ್ರೀ ಕ್ಷೇತ್ರದ ಅರಹಂತಗಿರಿಯ ಧವಳಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಅವರಿಂದ ಶನಿವಾರ `ಉತ್ತಮ ಮಾರ್ದವಧರ್ಮ~, ಭಾನುವಾರ `ಉತ್ತಮ ಆರ್ಜವಧರ್ಮ~ ಕುರಿತು ಪ್ರವಚನ. ಸೋಮವಾರ ಪೂರ್ಣಿಮಾ ಅಶೋಕ್ ಕುಮಾರ್ ಅವರಿಂದ `ಉತ್ತಮ ಶೌಚಧರ್ಮ~ ಕುರಿತು ಪ್ರವಚನ.  ಸ್ಥಳ: ಆದಿನಾಥ ದಿಗಂಬರ ಜಿನಮಂದಿರ ಸೌತ್ ಎಂಡ್ ವೃತ್ತ , ಜಯನಗರ. ಮಧ್ಯಾಹ್ನ 2.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT