ಶ್ರೀರಂಗಪಟ್ಟಣ: ಸಾಕ್ಷರ ಸಪ್ತಾಹದ ಅಂಗವಾಗಿ ನವ ಸಾಕ್ಷರರಿಗೆ ತಾಲ್ಲೂ ಕಿನ ರಾಂಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ನಿಧಾನ ಸೈಕಲ್ ಸ್ಪರ್ಧೆಯಲ್ಲಿ ಚಂದ್ರು ಪ್ರಥಮ ಹಾಗೂ ಮುರಳಿ ದ್ವಿತೀಯ ಸ್ಥಾನ ಪಡೆದರು.
ಗ್ರಾ.ಪಂ. ಸದಸ್ಯ ಆರ್.ಎನ್.ಗುರುಪ್ರಸಾದ್ ಸ್ಪರ್ಧೆಗೆ ಚಾಲನೆ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಆರ್.ಕೃಷ್ಣಪ್ಪಗೌಡ ಇತರರು ಇದ್ದರು. ಅಚ್ಚಪ್ಪನ ಕೊಪ್ಪಲು, ರಾಂಪುರ, ಲಾಲಿಪಾಳ್ಯ, ದೊಡ್ಡೇಗೌಡನ ಕೊಪ್ಪಲು ಇತರ ಗ್ರಾಮಗಳ ನವ ಸಾಕ್ಷಕರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜನರು ಕುತೂಹಲದಿಂದ ನಿಧಾನ ಸೈಕಲ್ ಸ್ಪರ್ಧೆ ವೀಕ್ಷಿಸಿದರು.
ತಾಲ್ಲೂಕಿನ ದರಸಗುಪ್ಪೆಯಲ್ಲಿ ಸೋಮವಾರ ಮಹಿಳಾ ನವ ಸಾಕ್ಷ ರರಿಗೆ ರಂಗೋಲಿ ಸ್ಪರ್ಧೆ ಏರ್ಪಡಿ ಸಲಾಗಿತ್ತು. ಸ್ಪರ್ಧೆಯಲ್ಲಿ ಸುನೀತಾ ಪ್ರಥಮ, ಶ್ವೇತ ದ್ವಿತೀಯ ಹಾಗೂ ಸುಧಾಮಣಿ ತೃತೀಯ ಬಹುಮಾನ ಪಡೆದರು. ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್, ಸಾಕ್ಷರ ಪ್ರೇರಕರಾದ ಲೀಲಾ ಮಣಿ, ಕೋಮಲ ಇತರರು ಇದ್ದರು.