ಬೆಂಗಳೂರು: ಗೋವಾದ ಬಿಚೋಲಿಮ್ನಲ್ಲಿ ಫೆಬ್ರುವರಿ 11 ರಿಂದ 13ರ ವರೆಗೆ ನಡೆಯುವ ದಕ್ಷಿಣ ವಲಯ ಸಾಫ್ಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡಗಳು ಭಾಗವಹಿಸಲಿವೆ.
ಕರ್ನಾಟಕ ಅಮೆಚೂರ್ ಸಾಫ್ಟ್ಬಾಲ್ ಸಂಸ್ಥೆ ತಂಡಗಳಿಗೆ ಆಯ್ಕೆಮಾಡಲಾದ ಆಟಗಾರರ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿತು. ತಂಡಗಳು ಇಂತಿವೆ.
ಪುರುಷರ ವಿಭಾಗ: ವಿನಯ್ ಟಿ. ಗೌಡ, ರವಿ ಕಿರಣ್, ಚಂದನ್, ಮಣಿ ಕಾಮತ್, ಮಂಜುನಾಥ್, ಅಭಿಷೇಕ್, ಅರುಳ್ ಶಕ್ತೆ, ಸಂಕೀರ್ತ್, ನವೀನ್ ಕುಮಾರ್, ಸಲ್ಮಾನ್ ಸಿದ್ದಿಕಿ, ಕಾರ್ತಿಕ್ ವಿ. ದೇವ್, ಎಂ.ಎನ್. ಹರೀಶ್, ಚರಣ್ ರಾಜ್, ಕೀರ್ತಿ ಹಾಗೂ ಸಂತೋಷ್ ಕೃಷ್ಣ. ಮುಖ್ಯ ತರಬೇತಿದಾರ: ಬಿ.ಎಸ್. ವಾಸುದೇವ್, ಸಹಾಯಕ ಕೋಚ್: ಆದಿತ್ಯ, ಮ್ಯಾನೇಜರ್: ಕಾಂತೇಶ್.
ಮಹಿಳಾ ವಿಭಾಗ: ಸೋನಮ್ ರಹೇಜಾ, ರಾಚೆಲ್ ಜೋಸ್, ಶೃಷ್ಠಿ ಥಾಫಿಯಾಲ್, ಹಾಜೆಲ್ ಮಿರಾಂಡ, ಕೆ.ವಿ. ಶಾಹಿ, ಸ್ನೇಹ ಪ್ರಸನ್ನ, ಪ್ರಿಯಾಂಕ, ಸಂಚಿತಾ ಕಿರಣ್, ಕುಸುಮಾವತಿ ರೆಡ್ಡಿ, ಸುನಿತಾ, ಶಿರಿನ್ ಶೆಟ್ಟಿ, ಮೇಘನಾ ಕಾಮತ್, ಡಯನಾ ರಾಬರ್ಟ್ಸ್, ನೀಲಮ್ಮ ಹಾಗೂ ಹಿತೈಶಿ. ಮುಖ್ಯ ಕೋಚ್: ಬಿ.ಆರ್. ಭೀಮರಾಜು, ಸಹಾಯಕ ಕೋಚ್: ಅಜಿತ್, ಮ್ಯಾನೇಜರ್: ಶ್ರೀಲತಾ ವಾಸು.