ಯಾವುದೇ ನಾಯಕನ ರಾಜಕೀಯ ಭವಿಷ್ಯ ಬರೆಯುವವರು ಕೋಡಿಮಠದ ಸ್ವಾಮಿಗಳಲ್ಲ; ಬೇರೆ ಜೋಯಿಸನೂ, ವಾಸ್ತುತಜ್ಞನೆನ್ನಲಾಗುವ ಠಕ್ಕನೂ ಅಲ್ಲ; ಅದು ಆಗಿನ ರಾಜಕೀಯ ಸನ್ನಿವೇಶ ಮತ್ತು ಪಕ್ಷದ ಹೈಕಮಾಂಡ್ ಎಂಬ ಗುಮ್ಮ-ಬೊಮ್ಮಗಳು!
ಒಂದು ಕುಟುಂಬವು ಮಾನಸಿಕ ನೆಮ್ಮದಿಗಾಗಿ ವ್ರತ, ಪೂಜೆ ಮಾಡಿಸಿದರೆ ಸಮಾಜ ಕಳೆದುಕೊಳ್ಳುವು ದೇನೂ ಇಲ್ಲ. ಆ ವರಸೆ, ಸಾರ್ವಜನಿಕ ವಿದ್ಯಮಾನವಾದ ರಾಜಕೀಯದಲ್ಲಿ ಪ್ರವೇಶಿಸುವುದು ಸರಿಯಲ್ಲ. ಅದನ್ನು ನಂಬುವ ಜನ ಮೂರ್ಖ ಗಣವೇ ಸರಿ!