ನೆಲಮಂಗಲ: ಸಣ್ಣ ರೈತರು ಮತ್ತು ಕಡು ಬಡ ವರ್ಗದ 75 ಫಲಾನುಭವಿಗಳಿಗೆ ಕೆನರಾ ಬ್ಯಾಂಕ್ ವತಿಯಿಂದ 33 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಲಾಯಿತು.
ಸಮೀಪದ ಕುಲುಮೆ ಕೆಂಪಲಿಂಗನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ನ ಉಪ ಮಹಾಪ್ರಬಂಧಕ ರವೀಂದ್ರ ಭಂಡಾರಿ ಚೆಕ್ ವಿತರಿಸಿದರು. ಕೆ.ಇ.ತಿಮ್ಮಪ್ಪ, ಆರ್.ಶಿವಣ್ಣ, ಜಯಪ್ರಕಾಶ್, ಚಂದ್ರಯ್ಯ, ವೆಂಕಟೇಶ್, ಉದಯಕುಮಾರ್ ಹಾಗೂ ಸುತ್ತಮುತ್ತಲ ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.