ಆನೇಕಲ್: ಬನ್ನೇರುಘಟ್ಟ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿದ್ದ ಲಕ್ಷ್ಮಣ್ (20) ಎಂಬ ಸಿಂಹ ಗುರುವಾರ ಮೃತಪಟ್ಟಿದೆ ಎಂದು ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಲಕ್ಷ್ಮಣ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ಸಿಂಹವನು್ನ 2001ರಲ್ಲಿ ಫರೀದಾಬಾದ್ನ ಕೋಮಲ್ ಸರ್ಕಸ್ನಿಂದ ಸಂರಕ್ಷಿಸಿ ತರಲಾಗಿತ್ತು’ ಎಂದು ತಿಳಿಸಲಾಗಿದೆ.