8ರಂದು ಎಂಇಎಸ್ ಪ್ರತಿಭಟನೆ
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಇದೇ 11ರಂದು ~ಸುವರ್ಣ ಸೌಧ~ ಉದ್ಘಾಟಿಸುವುದರ ವಿರುದ್ಧ ಧ್ವನಿ ಎತ್ತಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಜ್ಜಾಗಿದ್ದು ನಗರದಲ್ಲಿ ಸೋಮವಾರ (ಅ.8) ಪ್ರತಿಭಟನೆ ನಡೆಸಲಿದೆ.
ನಗರದಲ್ಲಿ ಸಭೆ ನಡೆಸಿದ ಎಂಇಎಸ್ ಹಾಗೂ ಮಹಾರಾಷ್ಟ್ರ ಪರ ಸಂಘಟನೆಗಳ ಮುಖಂಡರು, `ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಿದ ಶಿವಸೇನೆ ಸೇರಿದಂತೆ ಮಹಾರಾಷ್ಟ್ರದ ವಿವಿಧ ರಾಜಕೀಯ ಪಕ್ಷಗಳು, ಉದ್ಘಾಟನೆಗೆ ಬರಬಾರದು ಎಂದು ರಾಷ್ಟ್ರಪತಿ ಮೇಲೆ ಒತ್ತಡ ಹೇರಬೇಕು~ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಎಂಇಎಸ್ ಮುಖಂಡರಾದ ಬಿ.ಐ.ಪಾಟೀಲ, ಶಿವಾಜಿ ಸುಂಟಕರ, ವಿಜಯ ಮೋರೆ, ವೈ.ಬಿ.ಚೌಗುಲೆ, ರೇಣು ಕಿಲ್ಲೇಕರ, ಟಿ.ಕೆ. ಪಾಟೀಲ, ಕಿರಣ ಸಾಯನಾಕ ಇದ್ದರು.