ನವದಹೆಲಿ (ಪಿಟಿಐ): ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ವಿಶೇಷ ಮಹಾ ನಿರ್ದೇಶಕರಾಗಿ ಅರುಣ್ ಚೌಧರಿ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಸೂಕ್ಷ್ಮ ವಿಮಾನ ನಿಲ್ದಾಣಗಳು ಹಾಗೂ ಸರ್ಕಾರಿ ಕಟ್ಟಡಗಳ ಉಸ್ತುವಾರಿಯನ್ನು ಅವರು ನೋಡಿಕೊಳ್ಳಲಿದ್ದಾರೆ.
ದೇಶದ ವಿಮಾನ ನಿಲ್ದಾಣಗಳ ಮೇಲೆ, ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಉಗ್ರರ ಕರಿನೆರಳಿರುವ ಈ ಸಂದರ್ಭದಲ್ಲಿ ಈ ಹುದ್ದೆಗೆ ಮಹತ್ವ ಇದೆ. ಫೆಬ್ರುವರಿಯಲ್ಲಿ ಎಂ.ಎಸ್. ಬಾಲಿ ಅವರ ನಿವೃತ್ತಿಯ ನಂತರ ಈ ಹುದ್ದೆ ತೆರವಾಗಿತ್ತು.