ಬೆಂಗಳೂರು: ಸುಸ್ವರ ಕಲಾವೃಂದವು ಉಲ್ಲಾಳು ಗ್ರಾಮದ ರುದ್ರಮುನೇಶ್ವರ ಸ್ವಾಮಿ ದೇವಾಲಯದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕವಿ ವೈ.ಎಸ್.ಕೃಷ್ಣಮೂರ್ತಿ ಅವರು ರಾಗ ಸಂಯೋಜಿಸಿರುವ `ರುದ್ರಮುನೇಶ್ವರ ಸ್ವಾಮಿ' ಭಕ್ತಿಗೀತೆಗಳ ಸಿಡಿ ಬಿಡುಗಡೆ ಮಾಡಲಾಯಿತು.
ಕಾಂಗ್ರೆಸ್ ಮುಖಂಡರಾದ ಎಸ್.ಟಿ.ಸೋಮಶೇಖರ್, ಅನಿಲ್ಕುಮಾರ್, ಗಾಯಕರಾದ ಸಂಧ್ಯಾಲಕ್ಷ್ಮಿ, ಹರಿಚರಣ್, ಮೀನಾಕ್ಷಿ, ಸವಿತಾ, ಗಿರಿಜಾಂಬಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.