ಹುಮನಾಬಾದ್: ಸರ್ವಧರ್ಮ ಸಮನ್ವಯತೆಗೆ ಹೆಸರಾದ ಇಲ್ಲಿನ ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಲಿಂ. ಸಿದ್ಧರಾಜ ಶ್ರೀಗಳ 74ನೇ ಜಯಂತಿ ಆಚರಣೆ ಸ್ಮರಣಾರ್ಥ ಮಾಣಿಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾನ ಪೀಠಾಧಿಪತಿ ಜ್ಞಾನರಾಜಶ್ರೀ `ರಕ್ತದಾನವು ಜೀವದಾನಕ್ಕೆ ಸಮಾನ. ಅಪಘಾತಕ್ಕೀಡಾದ ಮತ್ತು ಕ್ಯಾನ್ಸರ್, ಹಿಮೋಫಿಲಿಯಾ, ಥ್ಯಾಲಸೀಮಿಯಾರೋಗಿಗಳು, ಗರ್ಭಿಣಿಯರು ರಕ್ತದಾನಿಗಳನ್ನು ಅವಲಂಬಿಸಿರುತ್ತಾರೆ~ ಎಂದರು.
ಸಿದ್ಧರಾಜ ಶ್ರೀಗಳ ಜನ್ಮದಿನ ಆಚರಣೆ ಸ್ಮರಣಾರ್ಥ ರಕ್ತದಾನ ಶಿಬಿರ ಏರ್ಪಡಿಸಿರುವ ಮಾಣಿಕ ಪಬ್ಲಿಕ್ ಶಾಲೆ ಸಿಬ್ಬಂದಿ ಕಾರ್ಯ ಶ್ಲಾಘನೀಯ , ಇಂಥ ಜನೋಪಯೋಗಿ ಚಟುವಟಿಕೆ ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಸಂಸ್ಥಾನದ ಚೇತನರಾಜ ಪ್ರಭು ತಿಳಿಸಿದರು.
ಪ್ರಾಚಾರ್ಯರಾದ ಸುಮಂಗಲಾ ಜಹಾಗಿರ್ದಾರ, ಆರ್.ಎನ್. ಜಾಧವ್, ಕೌಸ್ತುಭ ಜಹಾಗಿರ್ದಾರ, ಬೀದರ್ ಹಿರಿಯ ಆರೋಗ್ಯ ಶುಶ್ರೂಷಕಿ ಲಲಿತಾ, ಡಾ.ರಿತೇಶ ಸುಲೇಗಾಂವಕರ್, ಡ್ಯಾನಿಯೇಲ್, ಮಹೇಶ, ಆರೀಫ್ಅಲಿ, ಸಮಾಜ ಕಾರ್ಯಕರ್ತ ಭೀಮರಾವ ಪೊಲೀಸ್ ಪಾಟೀಲ ಇದ್ದರು.