ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಲ್‌ ವಿರುದ್ಧ ಸ್ವಾಮಿ ದೂರು

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಕಾನೂನು ಸಚಿವ ಕಪಿಲ್‌ ಸಿಬಲ್‌ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಪತ್ನಿಯ ಮಾಲೀಕತ್ವದ ಕಂಪೆನಿಗಳ ವಿವರಗಳನ್ನು ‘ಉದ್ದೇಶ ಪೂರ್ವಕ’ವಾಗಿ  ನಮೂದಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ  ಮುಖಂಡ ಸುಬ್ರಮಣಿಯನ್‌ ಸ್ವಾಮಿ, ಸಿಬಲ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಶನಿವಾರ ದೂರು ನೀಡಿ­ದ್ದಾರೆ.

ದೆಹಲಿಯ ಚಾಂದಿನಿ ಚೌಕ ಕ್ಷೇತ್ರದಿಂದ ಕಣಕ್ಕಿಳಿ­ದಿರುವ ಕಪಿಲ್‌ ಸಿಬಲ್‌ ಈ ಆರೋಪವನ್ನು ನಿರಾಕರಿಸಿದ್ದಾರೆ. ‘ಒಂದು ವೇಳೆ ನಾನು ಬಹಿರಂಗ ಪಡಿಸದೇ ಇರುವಂತಹ ಆಸ್ತಿಗಳು ನನ್ನ ಪತ್ನಿಯ ಹೆಸರಿನಲ್ಲಿರುವುದನ್ನು ಸ್ವಾಮಿ ಪತ್ತೆ ಹಚ್ಚಿದರೆ, ಅದನ್ನು ಉಚಿತವಾಗಿ ಅವರಿಗೆ ನೀಡುತ್ತೇನೆ’ ಎಂದು ಸಿಬಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT