ನವದೆಹಲಿ (ಪಿಟಿಐ): ಆರುಷಿ ಮತ್ತು ತಮ್ಮ ಮನೆ ಕೆಲಸದಾಳು ಹೇಮರಾಜ್ ಹತ್ಯೆ ಪ್ರಕರಣವನ್ನು ಗಾಜಿಯಾಬಾದ್ ನ್ಯಾಯಾಲಯದಿಂದ ದೆಹಲಿಗೆ ವರ್ಗಾಯಿಸುವಂತೆ ಪ್ರಕರಣದ ಆರೋಪಿಗಳೂ ಆದ ಆರುಷಿ ಪೋಷಕರ ಕೋರಿಕೆಯನ್ನು ಸಿಬಿಐ ವಿರೋಧಿಸಿದೆ. ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಸುಪ್ರೀಂ ಕೋರ್ಟ್ಗೆ ಈ ಮನವಿ ಮಾಡಿಕೊಂಡಿದ್ದರು.