ಸಿರುಗುಪ್ಪ: ತಾಲ್ಲೂಕಿನ ಗಡಿಭಾಗದ ಹತ್ತಾರು ಹಳ್ಳಿಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ ಸಜ್ಜೆ, ನವಣೆ, ಶೇಂಗಾ, ಸೂರ್ಯಕಾಂತಿ, ಮೆಣಸಿನಕಾಯಿ, ತೊಗರಿ, ಹತ್ತಿ ಬೆಳೆಗಳು ಭೂಮಿಯಿಂದ ಚಿಗುರು ಒಡೆಯುತ್ತಿದ್ದಂತಯೇ ಜಿಂಕೆಗಳು ಹಿಂಡು ಹಿಂಡಾಗಿ ಬಂದು ಇಡೀ ಬೆಳೆಯನ್ನೇ ತಿಂದು ಫಸಲು ಬೆಳೆಯ ದಂತೆ ಹಾನಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ತಾಲ್ಲೂಕಿನ ರಾವಿಹಾಳು, ವೆಂಕಟಾ ಪುರ, ಅಲನಬೂರು, ನಾಗರಹಾಳು, ಬಿ.ಎಂ.ಸೂಗೂರು, ಇಟಿಗಿಹಾಳು, ನಾಡಂಗ, ಅಗಸನೂರು, ಬೀರಳ್ಳಿ, ಬಸರಳ್ಳಿ, ಅಕ್ಕತಂಗಿಯರಹಾಳು, ಕಲ್ಲು ಕುಟಕನಹಾಳು ಮತ್ತಿತರ ಗ್ರಾಮಗಳ ರೈತರ ಹೊಲಗಳಲ್ಲಿ ಪ್ರತಿನಿತ್ಯ ಜಿಂಕೆಗಳ ಹಿಂಡು ಬಂದು ಬೆಳೆದ ಫಸಲಿಗೆ ಲಗ್ಗೆ ಇಟ್ಟು ಚಿಗುರನ್ನು ತಿಂದು ತೇಗುತ್ತಿವೆ,