ಸೀಗೆಹಳ್ಳಿಯ ಖಾಸಗಿ ಬಂಗಲೆ. ಪ್ರಮುಖ ಕಲಾವಿದರು ಅಲ್ಲಿ ಸೇರಿದ್ದರು. ಬಿ.ಮಲ್ಲೇಶ್ ನಿರ್ದೇಶನದ ‘ಕಲ್ಯಾಣಮಸ್ತು’ ಚಿತ್ರೀಕರಣದ ಸಂದರ್ಭವದು. ರಾಜಶೇಖರ್-ಕಾಂತರಾಜು ನಿರ್ಮಿಸಿರುವ ಈ ಚಿತ್ರಕ್ಕೆ ಸಿದ್ದಾರ್ಥ ಛಾಯಾಗ್ರಹಣವಿದೆ.ರಾಜ್ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದು, ದೊಡ್ಡರಂಗೇಗೌಡ, ಕೆ. ಕಲ್ಯಾಣ್ ಗೀತಸಾಹಿತ್ಯ ಬರೆದಿದ್ದಾರೆ.
ಬಸವರಾಜ ಅರಸ್ ಸಂಕಲನ ಮಾಡಲಿದ್ದಾರೆ. ನೃತ್ಯ: ಚಿನ್ನಿ ಪ್ರಕಾಶ್-ಮಂಜು, ಸಾಹಸ: ಕೌರವ ವೆಂಕಟೇಶ್, ಕಲೆ: ಬಾಬುಖಾನ್, ನಿರ್ವಹಣೆ: ದಾಡಿ ರಮೇಶ್. ತಾರಾಗಣದಲ್ಲಿ ರವಿಪ್ರಕಾಶ್, ಅಜಿತ್, ಪೂಜಾಗಾಂಧಿ, ತೇಜಸ್ವಿನಿ, ಅವಿನಾಶ್, ಸಿತಾರಾ, ಮಾಳವಿಕ, ಉಮಾಶ್ರಿ, ಅರವಿಂದ್, ಬ್ಯಾಂಕ್ ಜನಾರ್ದನ್, ಉಮೇಶ್, ಶ್ರಿಕಾಂತ್ ಹೊನ್ನವಳ್ಳಿ, ಜಯಸಿಂಹ ಮುಸುರಿ, ಡಿಂಗ್ರಿ ನಾಗರಾಜ್, ಮನ್ದೀಪ್ ರಾಯ್, ನಾಗರಾಜ ಕೋಟೆ ಮುಂತಾದವರಿದ್ದಾರೆ.