ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಭಾವತಿ ಅವರಿಗೆ `ಕಲಾ ಕುಸುಮ' ನಾಗರಾಜ್ ಅವರಿಗೆ `ಕಲಾ ಸ್ಫೂರ್ತಿ' ವಸುಧಾ ಶರ್ಮ ಅವರಿಗೆ `ಕಲಾ ಕೀರ್ತನಾ' ಸೀತಾ ಬಾಪಟ್ ಅವರಿಗೆ `ಕಲಾ ಚೈತನ್ಯ' ಶಾಂತ ಕುಮಾರಸ್ವಾಮಿ ಅವರಿಗೆ `ಕಲಾಶ್ರೀ' ರೇಖಾ ಪ್ರಹ್ಲಾದ್ರಾವ್ ಬಾಪಟ್ ಅವರಿಗೆ `ಸಾಂಘಿಕ ಶಕ್ತಿ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಗಾಂಧಿನಗರ ಯುವಜನ ಸಂಘದ ಅಧ್ಯಕ್ಷ ಎಂ.ಎನ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ, ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಎಸ್.ಆರ್. ತಿಮ್ಮಪ್ಪ ಹಾಜರಿದ್ದರು. ಚಿನ್ಮಯಿ ಪ್ರಾರ್ಥಿಸಿದರು. ಎಚ್.ಆರ್. ಶ್ರೀಧರ್ ಸ್ವಾಗತಿಸಿದರು. ಎಸ್.ಎಸ್. ರಮೇಶ್ ಪ್ರಾಸ್ತಾವಿಕ ಮಾತನಾಡಿದರು.