ಔರಂಗಾಬಾದ್ (ಬಿಹಾರ) (ಪಿಟಿಐ): ಮಗನ ಬಗ್ಗೆ ದೇವರು ದಯೆ ತೋರುತ್ತಾನೆ ಎಂಬ ನಂಬಿಕೆ ಇರಿಸಿಕೊಂಡಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ನ ಕುಟುಂಬವು ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಟಿ.ವಿ ಸುದ್ದಿವಾಹಿನಿಗಳಿಂದ ಕಣ್ಣು, ಕಿವಿ ಕೀಳಲಿಲ್ಲ.
ಮಂಗಳವಾರ ರಾತ್ರಿಯಿಂದ ಆಹಾರ ಸೇವಿಸದ ಕುಟುಂಬ ಸದಸ್ಯರು ಬುಧವಾರ ಸಂಜೆವರೆಗೂ ಏನೂ ತಿಂದಿರಲಿಲ್ಲ. ಶುಕ್ರವಾರ ಶಿಕ್ಷೆ ಪ್ರಕಟಣೆ ಆಗುತ್ತದೆ ಎಂಬ ವಿಷಯ ತಿಳಿದ ಮೇಲೆ ಕುಟುಂಬ ಸದಸ್ಯರು ತಾತ್ಕಾಲಿಕವಾದರೂ ಕೊಂಚ ನಿರಾಳರಾದರು ಎಂದು ಕುಟುಂಬದ ಆಪ್ತರು ಹೇಳಿದ್ದಾರೆ.