ಬೆಂಗಳೂರು: ಕಾವೇರಿ ವಿಷಯದಲ್ಲಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಪ್ರಕಟಿಸಿರುವ `ಕಾವೇರಿ ಲೋಪ: ವಸ್ತುಸ್ಥಿತಿ~ ಕಿರುಹೊತ್ತಿಗೆ ಸುಳ್ಳಿನ ಕಂತೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
`ಕಾವೇರಿ ಕೊಳ್ಳ ಭಾಗದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೆಚ್ಚಾದ ಬಳಿಕ ಕಿರುಹೊತ್ತಿಗೆ ಮೂಲಕ ಜನರನ್ನು ದಿಕ್ಕುತಪ್ಪಿಸುವ ಯತ್ನ ನಡೆದಿದೆ. ಇದನ್ನು ಸಿದ್ಧಪಡಿಸಲು ವಿನಿಯೋಜಿಸಿದ ಸಮಯವನ್ನು ಪ್ರಧಾನಿ ಭೇಟಿ ಮಾಡಿ ಮನವೊಲಿಸಲು ಬಳಸಿದ್ದರೆ ರಾಜ್ಯದ ರೈತರಿಗೆ ಅನುಕೂಲ ಆಗುತ್ತಿತ್ತು~ ಎಂದು ವ್ಯಂಗ್ಯವಾಡಿದ್ದಾರೆ.