ಬೆಂಗಳೂರು: ಭಾನುವಾರ ನಡೆಯ ಬೇಕಿದ್ದ ರಾಜ್ಯ ಸೂಪರ್ ಡಿವಿಷನ್ ಹಾಕಿ ಲೀಗ್ನ ಎಲ್ಲ ಮೂರು ಪಂದ್ಯಗ ಳನ್ನು ಮುಂದೂಡಲಾಗಿದೆ.ಕ್ರೀಡಾಂಗಣದ ಟರ್ಫ್ಗೆ ನೀರು ಹಾಯಿಸುವ ಯಂತ್ರ ಮತ್ತೆ ಕೈಕೊಟ್ಟ ಕಾರಣ ಭಾನುವಾರ ಯಾವುದೇ ಪಂದ್ಯಗಳು ನಡೆಯಲಿಲ್ಲ.
ಪಂಪ್ ಹೌಸ್ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದದ್ದರಿಂದ ನೀರು ಹಾಯಿಸಲು ಸಾಧ್ಯವಾಗಿಲ್ಲ. ಭಾನುವಾರ ಮೊದಲ ಪಂದ್ಯದಲ್ಲಿ ಎಎಸ್ಸಿ ತಂಡ ಎಂಎಲ್ಐ ಜೊತೆ ಪೈಪೋಟಿ ನಡೆಸಬೇಕಿತ್ತು. ನೀರು ಹಾಯಿಸುವ ಯಂತ್ರ ಈ ಹಿಂದೆ ಎರಡು ಬಾರಿ ಕೈಕೊಟ್ಟಿತಲ್ಲದೆ, ಪಂದ್ಯವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು.