ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಸಹಕಾರ

Last Updated 13 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಸೌರಮಂಡಲದ ಒಡೆಯನು ಸೂರ‌್ಯನು
ಬಿಡುವಿಲ್ಲದೆ ದುಡಿಮೆಯ ಮಾಡಿಹನು
ಇರುಳೊಡನೆ ಹೋರಾಡಿ ಬೆಳಕನು ಹರಡಿ
ಬಣ್ಣದೋಕುಳಿಯಲಿ ಜಳಕವ ಮಾಡಿಹನು

ಪಯಣದ ಮೊದಲಲಿ ಮೂಡಣ ಮನೆಯಲಿ
ಸಡಗರದಿ ಬಿಡಿಸುವ ವಿಧ-ವಿಧ ಚಿತ್ತಾರ
ಚಿಲಿಪಿಲಿ ಕಲರವ ಗಿಡದಲಿ-ಮರದಲಿ
ಘಮ ಘಮ ಸುಮ ಅರಳಿವೆ ತರಾ-ತರ

ಅಡಗಿತ್ತು ಕನಸಿನ ಬೀಜ `ಹದ~ ಮಣ್ಣೊಳಗೆ
ಸವಿದಿತ್ತು ಎಳೆಕಿರಣದ ತನ್ನೊಳಗೆ
ದಿನಗಳು ಉರುಳಿ ಮೊಳಕೆಯು ಚಿಗುರಿ
ಕಾಳರಾಶಿ ತೂಗಿ ತೊನೆಯಿತು ತೆನೆಯೊಳಗೆ

ಅನ್ನದಾತನ ಮನದಿ ಮೂಡಿತು ನೆಮ್ಮದಿ
ಮರೆಯಾಯಿತು. ಹಸಿವಿನ ಬೇಗುದಿ
ಮಣ್ಣಿನ ಮಕ್ಕಳು ಮನದುಂಬಿ ನಕ್ಕರೆ
ದೇಶ ದಾಟುವುದು ಬಡತನದ ಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT