<p>ಸೌರಮಂಡಲದ ಒಡೆಯನು ಸೂರ್ಯನು<br /> ಬಿಡುವಿಲ್ಲದೆ ದುಡಿಮೆಯ ಮಾಡಿಹನು<br /> ಇರುಳೊಡನೆ ಹೋರಾಡಿ ಬೆಳಕನು ಹರಡಿ<br /> ಬಣ್ಣದೋಕುಳಿಯಲಿ ಜಳಕವ ಮಾಡಿಹನು</p>.<p>ಪಯಣದ ಮೊದಲಲಿ ಮೂಡಣ ಮನೆಯಲಿ<br /> ಸಡಗರದಿ ಬಿಡಿಸುವ ವಿಧ-ವಿಧ ಚಿತ್ತಾರ<br /> ಚಿಲಿಪಿಲಿ ಕಲರವ ಗಿಡದಲಿ-ಮರದಲಿ<br /> ಘಮ ಘಮ ಸುಮ ಅರಳಿವೆ ತರಾ-ತರ</p>.<p>ಅಡಗಿತ್ತು ಕನಸಿನ ಬೀಜ `ಹದ~ ಮಣ್ಣೊಳಗೆ<br /> ಸವಿದಿತ್ತು ಎಳೆಕಿರಣದ ತನ್ನೊಳಗೆ<br /> ದಿನಗಳು ಉರುಳಿ ಮೊಳಕೆಯು ಚಿಗುರಿ<br /> ಕಾಳರಾಶಿ ತೂಗಿ ತೊನೆಯಿತು ತೆನೆಯೊಳಗೆ</p>.<p>ಅನ್ನದಾತನ ಮನದಿ ಮೂಡಿತು ನೆಮ್ಮದಿ<br /> ಮರೆಯಾಯಿತು. ಹಸಿವಿನ ಬೇಗುದಿ<br /> ಮಣ್ಣಿನ ಮಕ್ಕಳು ಮನದುಂಬಿ ನಕ್ಕರೆ<br /> ದೇಶ ದಾಟುವುದು ಬಡತನದ ಗೆರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಸೌರಮಂಡಲದ ಒಡೆಯನು ಸೂರ್ಯನು<br /> ಬಿಡುವಿಲ್ಲದೆ ದುಡಿಮೆಯ ಮಾಡಿಹನು<br /> ಇರುಳೊಡನೆ ಹೋರಾಡಿ ಬೆಳಕನು ಹರಡಿ<br /> ಬಣ್ಣದೋಕುಳಿಯಲಿ ಜಳಕವ ಮಾಡಿಹನು</p>.<p>ಪಯಣದ ಮೊದಲಲಿ ಮೂಡಣ ಮನೆಯಲಿ<br /> ಸಡಗರದಿ ಬಿಡಿಸುವ ವಿಧ-ವಿಧ ಚಿತ್ತಾರ<br /> ಚಿಲಿಪಿಲಿ ಕಲರವ ಗಿಡದಲಿ-ಮರದಲಿ<br /> ಘಮ ಘಮ ಸುಮ ಅರಳಿವೆ ತರಾ-ತರ</p>.<p>ಅಡಗಿತ್ತು ಕನಸಿನ ಬೀಜ `ಹದ~ ಮಣ್ಣೊಳಗೆ<br /> ಸವಿದಿತ್ತು ಎಳೆಕಿರಣದ ತನ್ನೊಳಗೆ<br /> ದಿನಗಳು ಉರುಳಿ ಮೊಳಕೆಯು ಚಿಗುರಿ<br /> ಕಾಳರಾಶಿ ತೂಗಿ ತೊನೆಯಿತು ತೆನೆಯೊಳಗೆ</p>.<p>ಅನ್ನದಾತನ ಮನದಿ ಮೂಡಿತು ನೆಮ್ಮದಿ<br /> ಮರೆಯಾಯಿತು. ಹಸಿವಿನ ಬೇಗುದಿ<br /> ಮಣ್ಣಿನ ಮಕ್ಕಳು ಮನದುಂಬಿ ನಕ್ಕರೆ<br /> ದೇಶ ದಾಟುವುದು ಬಡತನದ ಗೆರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>