`ಸೆಂಟ್ರಲ್ ಜೈಲ್~ನಲ್ಲಿ ಹೊಡೆದಾಟ
ಯಾವುದೋ ಕಾರಣಕ್ಕಾಗಿ ಚಿತ್ರದ ನಾಯಕ ಜೈಲು ಸೇರಿರುತ್ತಾನೆ. ಅಲ್ಲಿ ಆತನಿಗೆ ವ್ಯಕ್ತಿಯೊಬ್ಬನ ಪರಿಚಯವಾಗುತ್ತದೆ. ಜೈಲಿನಿಂದ ಬಂದ ತಕ್ಷಣ ನಾಯಕ ತಾನು ಶಿಕ್ಷೆ ಅನುಭವಿಸಲು ಕಾರಣನಾದವನ ಜೊತೆ ಹೊಡೆದಾಡುತ್ತಾನೆ. ಈ ದೃಶ್ಯವನ್ನು ತಾವರಕೆರೆ ಭೂತಬಂಗಲೆಯಲ್ಲಿ `ಸೆಂಟ್ರಲ್ ಜೈಲ್~ ಚಿತ್ರಕ್ಕಾಗಿ ನಿರ್ದೇಶಕ ಬಲರಾಂ ಚಿತ್ರಿಸಿಕೊಂಡರು. ಶ್ರೀಕಾಂತ್, ನೀನಾಸಂ ಅಶ್ವತ್ಥ್, ಶರತ್ ಲೋಹಿತಾಶ್ವ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಚಿತ್ರಕ್ಕೆ ಜಾನಕೀರಾಂ ಅವರ ನಿರ್ಮಾಣ, ವಿ.ಮನೋಹರ್ ಸಂಗೀತ, ಜನಾರ್ದನ್ ಛಾಯಾಗ್ರಹಣ ಇದೆ.